ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾವರ ಬಳಿ ಭೀಕರ ರಸ್ತೆ ಅಪಘಾತ

|
Google Oneindia Kannada News

Honnavar
ಹೊನ್ನಾವರ, ನ. 16: ಉತ್ತರ ಕನ್ನಡ ಜಿಲ್ಲೆಯ ಮಾವಿನಗುಂಡಿ ಬಳಿಯ ಸೂಳಕೇರಿ ಎಂಬಲ್ಲಿ ಭೀಕರ ರಸ್ತೆ ದುರಂತ ನಡೆದಿದೆ. ಶಿವಮೊಗ್ಗದಿಂದ ಬಂಗಾರುಮಕ್ಕಿಗೆ ತೆರಳುತ್ತಿದ್ದ ಬಸ್ 60 ಅಡಿ ಆಳದ ಪ್ರಪಾತಕ್ಕೆ ಬಸ್ ಉರುಳಿದೆ. ಐವರಿಗೆ ತೀವ್ರಗಾಯಗಳಾಗಿದೆ, ಮಿಕ್ಕಂತೆ 50ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬ್ರೇಕ್ ಫೇಲ್ ಆಗಿರುವ ಶಂಕೆ:ಸುಮಾರು 80 ಜನರಿದ್ದ ಬಸ್ ಶಿವಮೊಗ್ಗದಿಂದ ಬಂಗಾರುಮಕ್ಕಿಗೆ ತೆರಳುತ್ತಿತ್ತು. ವೀರಾಂಜನೆಯ ದೇವಸ್ಥಾನದಲ್ಲಿ ದೇವರಿಗೆ ಸಿಎಂರಿಂದ ಸುವರ್ಣಕವಚ ಅರ್ಪಣೆ ಕಾರ್ಯಕ್ರಮವಿದೆ. ಕಾರ್ತಿಕ ಸೋಮವಾರದ ವಿಶೇಷ ಪೂಜೆಗೆ ಬಸ್ ನಲ್ಲಿದ್ದ ಬಹುತೇಕ ಜನರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ನೆರವಿಗೆ ಬಂದ ಸಚಿವ ಹರತಾಳು ಹಾಲಪ್ಪ: ಬಸ್ ದುರಂತದ ಕೆಲ ನಿಮಿಷ ನಂತರ ಅದೇ ಹಾದಿಯಲ್ಲಿ ಬಂದ ಸಚಿವ ಹರತಾಳ್ ಹಾಲಪ್ಪ ಅವರು ತಮ್ಮ ಬೆಂಗಾವಲು ಕಾರುಗಳಲ್ಲಿ ಗಾಯಾಳುಗಳನ್ನು ಸ್ಥಳೀಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಒಯ್ದು, ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಂಬ್ಯುಲೆನ್ಸ್ ಸ್ಥಳಕ್ಕೆ ತಲುಪಲು ಸುಮಾರು ಒಂದೂವರೆ ಗಂಟೆಯಾದರೂ ಬೇಕು. ಇದು ನಿರ್ಜನ ಪ್ರದೇಶ, ಮಣಿಪಾಲ್ ಆಸ್ಪತ್ರೆ ಹಾಗೂ ಗೇರುಸೊಪ್ಪೆ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಜನರ ರಕ್ಷಣೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X