ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರ: ಜಿಲೇಟಿನ್ ಕಡ್ಡಿ ಸ್ಫೋಟಕ್ಕೆ 15 ಬಲಿ
ಘಟನೆ ನಡೆದ ಮನೆಯಲ್ಲಿ ಅಕ್ರಮವಾಗಿ ಜಿಲೇಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ನಂತರ ಸ್ಥಳೀಯ ಪೊಲೀಸರು ತಿಳಿಸಿದರು. ಈ ಘಟನೆಯಿಂದ ಗಾಯಗೊಂಡ 20ಕ್ಕೂ ಅಧಿಕ ಜನರನ್ನು ಗುಂಟೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಕ್ವಾರಿ ಗುತ್ತಿಗೆಗಾರ ಕೋಟೇಶ್ವರ ರಾವ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜಿಲೇಟಿನ್ ಕಡ್ಡಿಗಳನ್ನು ಗಣಿ ಮಾಲೀಕರಿಗೆ ಮಾರಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ತನಿಖೆ ಮುಂದುವರೆದಿದೆ.
(ಏಜೆನ್ಸೀಸ್)
Comments
Story first published: Monday, November 16, 2009, 15:15 [IST]