ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಕಾರಣಿಗಳು ಮನುಷ್ಯರಾಗಬೇಕು, ಸಿದ್ಧಗಂಗಾ ಶ್ರೀ
ಸಮಾಜದಲ್ಲಿ ಇಂದು ನೈತಿಕ ಅಧಃಪತನ ಕಾಣುತ್ತಿದೆ. ಮನುಷ್ಯ ಹಣ, ಆಸ್ತಿ, ಅಧಿಕಾರದ ಗುಲಾಮನಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ನವಸಮಾಜ ನಿರ್ಮಾಣ ಮಾಡಲು ಯುವಕರು ಮುಂದೆ ಬರಬೇಕು. ಬುದ್ದ, ಬಸವಣ್ಣ ಮುಂತಾದ ಮಹಾನುಭಾವರ ಕೊಡುಗೆ ಎಲ್ಲ ಕಾಲಕ್ಕೂ ಬೇಕಾಗಿದೆ. ಅಜ್ಞಾನ, ದಾರಿದ್ರ್ಯ ದೂರವಾಗಬೇಕು. ಇಂದು ಮಾನವ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ ಎಂದು ಸಿದ್ದಗಂಗಾ ಶ್ರೀಗಳು ಹೇಳಿಕೆ ನೀಡಿದ್ದಾರೆ.
ನಗರದ ಬಣ್ಣದ ಮಠದಲ್ಲಿ ಗುರುವಾರ (ನ 12 ) ಬಸವತತ್ವ ಮತ್ತು ಚಿಂತನಾಗೋಷ್ಟಿಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪ್ರಪಂಚ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿದೆ. ಆದರೆ ಆಂತರಿಕ ಜೀವನದಲ್ಲಿ ಇನ್ನು ಪ್ರಗತಿಯಾಗಿಲ್ಲ. ಉಗ್ರವಾದಿ ಚಟುವಟಿಕೆ ಮತ್ತು ಯುದ್ದದಿಂದ ಅಶಾಂತಿ ತಲೆದೋರಿದೆ. ಇದೆಲ್ಲಾ ಹೋಗಿ ಭೀತಿ ರಹಿತ ಆದರ್ಶ ಸಮಾಜ ನಿರ್ಮಾಣವಾಗಬೇಕೆಂದು ಸಿದ್ದಗಂಗಾ ಶ್ರೀಗಳು ಆಶಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
yediyurappa ತುಮಕೂರು tumakuru politics politician shivakumar swamiji ರಾಜಕಾರಣ ರಾಜಕಾರಣಿಗಳು flood ಪ್ರವಾಹ ಸಿದ್ಧಗಂಗಾ ಮಠ
Story first published: Friday, November 13, 2009, 11:17 [IST]