ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಭಾ ಒಳ್ಳೆ ಕೆಲಸಗಾರ್ತಿ, ರೇವಣ್ಣ
ಯಡಿಯೂರಪ್ಪ ಮತ್ತು ಬಿಜೆಪಿಯ ಮುಖ ನೋಡಿ ಜನ ಆ ಪಕ್ಷಕ್ಕೆ ಮತ ಹಾಕಿರೋದು, ಕೋರ್ ಕಮಿಟಿಗಲ್ಲ. ಒಂದು ವೇಳೆ ಸಮ್ಮಿಶ್ರ ಸರಕಾರ ಇದ್ದರೆ ಮಾತ್ರ ಕೋರ್ ಕಮಿಟಿ ರಚಿಸಬೇಕು. ಸರಕಾರದಲ್ಲಿ ರೆಡ್ಡಿ ಬಣ ಮತ್ತು ಯಡ್ಡಿ ಬಣ ಎನ್ನುವ ಗುಂಪುಗಳಿವೆ, ಬೇರೆ ಯಾವ ಮುಖ್ಯಮಂತ್ರಿಗಾದರೂ ಈ ಪರಿಸ್ಥಿತಿ ಬಂದಿದ್ದರೆ ರಾಜೀನಾಮೆ ಬಿಸಾಕಿ ಮರ್ಯಾದೆ ಉಳಿಸಿಕೊಳ್ಳುತ್ತಿದ್ದರು ಎಂದು ರೇವಣ್ಣ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕಾರದ ಪ್ರಮುಖ ನಿರ್ಧಾರವನ್ನು ಕೋರ್ ಕಮಿಟಿ ತೆಗೆದುಕೊಳ್ಳುವುದಾದರೆ ಮುಖ್ಯಮಂತ್ರಿ ಯಾಕಿರಬೇಕು, ಇದು ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ. ಯಾವ ಮುಖ್ಯಮಂತ್ರಿಗಳಿಗೂ ಈ ರೀತಿಯ ಅವಮಾನ ಆಗಬಾರದಾಗಿತ್ತು, ಯಡಿಯೂರಪ್ಪ ರಾಜೀನಾಮೆ ನೀಡಿ ಗೌರವಯುತವಾಗಿ ಹೊರ ನಡೆದರೆ ಉತ್ತಮ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
yediyurappa ಯಡಿಯೂರಪ್ಪ ಜನಾರ್ದನ ರೆಡ್ಡಿ hd revanna ಎಚ್ ಡಿ ರೇವಣ್ಣ rift in bjp ಬಿಜೆಪಿ ಬಿರುಕು janardhana reddy ಶೋಭಾ ಕರಂದ್ಲಾಜೆ shobha karandlaje
Story first published: Friday, November 13, 2009, 15:40 [IST]