ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ ಒಳ್ಳೆ ಕೆಲಸಗಾರ್ತಿ, ರೇವಣ್ಣ

|
Google Oneindia Kannada News

HD Revanna
ಹಾಸನ, ನ. 13 : ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪರ್ಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಶೋಭಾ ಕರಂದ್ಲಾಜೆಗೆ ಸೇರಬೇಕು. ಉತ್ತಮವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಸಚಿವೆಯನ್ನು ಸಂಪುಟದಿಂದ ಕಿತ್ತು ಹಾಕಿದ್ದು ತಪ್ಪು. ಬಿಜೆಪಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವವರಿಗೆ ಸ್ಥಾನಮಾನ ಸಿಗುವುದಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಬೇಕೇ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಮತ್ತು ಬಿಜೆಪಿಯ ಮುಖ ನೋಡಿ ಜನ ಆ ಪಕ್ಷಕ್ಕೆ ಮತ ಹಾಕಿರೋದು, ಕೋರ್ ಕಮಿಟಿಗಲ್ಲ. ಒಂದು ವೇಳೆ ಸಮ್ಮಿಶ್ರ ಸರಕಾರ ಇದ್ದರೆ ಮಾತ್ರ ಕೋರ್ ಕಮಿಟಿ ರಚಿಸಬೇಕು. ಸರಕಾರದಲ್ಲಿ ರೆಡ್ಡಿ ಬಣ ಮತ್ತು ಯಡ್ಡಿ ಬಣ ಎನ್ನುವ ಗುಂಪುಗಳಿವೆ, ಬೇರೆ ಯಾವ ಮುಖ್ಯಮಂತ್ರಿಗಾದರೂ ಈ ಪರಿಸ್ಥಿತಿ ಬಂದಿದ್ದರೆ ರಾಜೀನಾಮೆ ಬಿಸಾಕಿ ಮರ್ಯಾದೆ ಉಳಿಸಿಕೊಳ್ಳುತ್ತಿದ್ದರು ಎಂದು ರೇವಣ್ಣ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಕಾರದ ಪ್ರಮುಖ ನಿರ್ಧಾರವನ್ನು ಕೋರ್ ಕಮಿಟಿ ತೆಗೆದುಕೊಳ್ಳುವುದಾದರೆ ಮುಖ್ಯಮಂತ್ರಿ ಯಾಕಿರಬೇಕು, ಇದು ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ. ಯಾವ ಮುಖ್ಯಮಂತ್ರಿಗಳಿಗೂ ಈ ರೀತಿಯ ಅವಮಾನ ಆಗಬಾರದಾಗಿತ್ತು, ಯಡಿಯೂರಪ್ಪ ರಾಜೀನಾಮೆ ನೀಡಿ ಗೌರವಯುತವಾಗಿ ಹೊರ ನಡೆದರೆ ಉತ್ತಮ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X