ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಬಲ ಹೆಗಡೆ ನೆನಪಿಗೆ ಒಂದು ತಾಳಮದ್ದಲೆ

|
Google Oneindia Kannada News

Keremane Mahabala Hegde
ಕೌರವ, ಭೀಷ್ಮ, ಕೀಚಕ, ವಿಶ್ವಾಮಿತ್ರ… ಪ್ರತಿಯೊಬ್ಬ ಪುರಾಣ ಪುರುಷನ ರಂಗದ ಅಸ್ತಿತ್ವಕ್ಕೆ ಮತ್ತೊಮ್ಮೆ ಅಲ್ಪವಿರಾಮ ಬಿದ್ದಿದೆ. ನಿರಂತರವಾಗಿ ಅಭ್ಯಸಿಸಿ, ಪರದೆಯ ಮುಂದೆ ತಂದು, ಆಯಾ ಪಾತ್ರಕ್ಕೆ ತಕ್ಕ ಗೌರವ ಸಲ್ಲಿಸಿ, "ನಾನು ನನ್ನಂತೆಯೆ, ಬೇರೆ ಯಾರಂತೆಯೂ ಅಲ್ಲ" ಅನ್ನುವ ವಿಶ್ವಾಸದಲ್ಲಿ ಅವರು ಇಟ್ಟ ಒಂದೊಂದು ಹೆಜ್ಜೆಯೂ "ಮಹಾಬಲ" ಹೆಜ್ಜೆಯಾಯಿತು. ಕ್ಷೇತ್ರ ವಿಸ್ತಾರವಾಯಿತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಹೋಗಿದ್ದಾರೆ. ಬಹುಶ: ಅಲ್ಲೀಗ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರಬಹುದು. ಇಲ್ಲೀಗ ಅವರ ನೆನಪು. ಅವರ ವಿಚಾರ. ಬರಹ, ಭಾಷಣ, ಚರ್ಚೆ, ಅರ್ಥ… ಮತ್ತೊಂದು. ಎಲ್ಲ ವರ್ತನಮಾನ. ಬರುವ ಶನಿವಾರ ಅವರಿಗೊಂದು ಶ್ರದ್ಧಾಂಜಲಿ, ಒಂದು ತಾಳಮದ್ದಲೆ.

ಹಿಮ್ಮೇಳ:
ನೆಬ್ಬೂರು ನಾರಾಯಣ ಭಾಗವತ
ವಿದ್ವಾನ್ ಗಣಪತಿ ಭಟ್
ಎ ಪಿ ಪಾಠಕ್

ಅರ್ಥಧಾರಿಗಳು: ಉಮಾಕಾಂತ್ ಭಟ್ ಮೇಲುಕೋಟೆ
ವಾಸುದೇವ ರಂಗ ಭಟ್, ಉಡುಪಿ
ಸುಧನ್ವಾ ದೇರಾಜೆ
ಶಶಾಂಕ ಅರ್ನಾಡಿ

ಪ್ರಸಂಗ:
ರಾವಣ ವಧೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಚಾಮರಾಜಪೇಟೆ, ಬೆಂಗಳೂರು
ಸಮಯ:ಸಂಜೆ 4.30ಕ್ಕೆ
ದಿನಾಂಕ: ನವೆಂಬರ್ 14,ಶನಿವಾರ

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X