ಪತ್ರಕರ್ತರ ಮೇಲೆ ವಕೀಲರ ಪುಂಡಾಟಿಕೆ
ನ್ಯಾಯಮೂರ್ತಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಆರೋಪ ಹೊತ್ತಿದ್ದು, ಅವರು ಯಾವ ಕಾರಣಕ್ಕೂ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ವಕೀಲರ ಸಂಘ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಇದನ್ನು ವರದಿ ಮಾಡಲು ತೆರಳದಿದ್ದ ಪತ್ರಕರ್ತರ ಮೇಲೆ ವಕೀಲರ ಗುಂಪೊಂದು ದಾಳಿ ನಡೆಸಿದೆ. ಅಲ್ಲದೇ ಸಿಎನ್ಎನ್ ಐಬಿಎನ್ ಕ್ಯಾಮರಾಮನ್ ಮೋಹನ್ ಎಂಬುವವರ ಮೇಲೆ ಹದಿನೈದು ಇಪ್ಪತ್ತು ವಕೀಲರ ಏಕಕಾಲದಲ್ಲಿ ದಾಳಿ ನಡೆಸಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಕೀಲರು ಪತ್ರಕರ್ತರ ಮೇಲೆ ಮೂರನೇ ಬಾರಿ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ.
ತಕ್ಷಣ ಪ್ರತಿಭಟನೆ ಆರಂಭಿಸಿದ ಪತ್ರಕರ್ತರು, ಸಚಿವ ಸುರೇಶಕುಮಾರ್ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಆಗ ಸ್ಥಳಕ್ಕೆ ದೌಡಾಯಿಸಿದ ಸುರೇಶಕುಮಾರ್, ದಾಳಿ ನಡೆಸಿದ ವಕೀಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅನಾಗರಿಕ ವರ್ತನೆ. ದಾಳಿ ನಡೆಸಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಅಲ್ಲದೇ ಬಾರ್ ಅಸೋಸಿಯಷನ್ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಬಾರ್ ಅಸೋಸಿಯೇಷನ್ ನ ಪುಟ್ಟೇಗೌಡ ಅವರು, ಪತ್ರಕರ್ತರ ಕ್ಷಮೆಯಾಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)