ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಿನಕರನ್ ವಿವಾದ : ಕೋರ್ಟ್ ಆವರಣದಲ್ಲಿ ಮಾರಾಮಾರಿ
ದಿನಕರನ್ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರಲು ನಗರದ ಎಲ್ಲಾ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸುವ ಬೆಂಗಳೂರು ವಕೀಲರ ಸಂಘದ ನಿರ್ಣಯಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದರೂ, ಕಲಾಪ ಬಹಿಷ್ಕಾರಕ್ಕೆ ಮುಂದಾದ ವಕೀಲರಿಗೂ ಮತ್ತು ದಿನಕರನ್ ಪರ ವಕೀಲರಿಗೂ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ವಕೀಲರಿಗೆ ಗಾಯಗಳಾಗಿವೆ.
ದಿನಕರನ್ ಪ್ರಕರಣ ಸುಪ್ರಿಂ ಕೋರ್ಟ್ ನಲ್ಲಿದೆ, ಅವರ ವಿರುದ್ಧದ ಅಂತಿಮವಾಗಿ ಹೊರಬರುವವರೆಗೂ ಅವರು ಕಲಾಪ ನಡೆಸುವುದರಲ್ಲಿ ತಪ್ಪೇನಿದೆ ಎಂದು ದಿನಕರನ್ ಪರ ವಕೀಲರ ವಾದವಾದರೆ, ಭ್ರಷ್ಟಾತಾರ ಆರೋಪ ಹೊತ್ತಿರುವ ನ್ಯಾಯಮೂರ್ತಿಗಳು ಕಳಂಕ ಮುಕ್ತರಾಗುವವರೆಗೂ ಕಲಾಪಗಳಲ್ಲಿ ಭಾಗವಹಿಸಬಾರದು ಎಂದು ವಕೀಲರ ಸಂಘದ ಒತ್ತಾಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, November 9, 2009, 15:58 [IST]