ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹಾಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ

|
Google Oneindia Kannada News

Karnataka Rajyotsava in Mohali
ಬೆಂಗಳೂರು, ನ.7: ವಾರ್ತಾ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ ಹಾಗೂ ಕನ್ನಡ ಸಂಘ, ಚಂಡಿಗಢ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 15 ರಂದು ಸಂಜೆ 5 ಗಂಟೆಗೆ ಮೊಹಾಲಿಯಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯೋತ್ಸವವನ್ನು ಮೊಹಾಲಿ ಜಿಲ್ಲಾ ಯೋಜನಾ ಮಂಡಳಿಯ ಅಧ್ಯಕ್ಷ ಎನ್. ಕೆ. ಶರ್ಮಾ ಅವರು ಉದ್ಫಾಟಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವ ಈ ಸಮಾರಂಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ನಬಾರ್ಡ್‌ನ ಜನರಲ್ ಮ್ಯಾನೇಜರ್ (ಚಂಡಿಗಢ) ಶ್ರೀ ಆರ್. ಎಂ. ಕುಮ್ಕೂರ್ ಹಾಗೂ ಚಂಡಿಗಢ ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಜಂಬಗಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ದೆಹಲಿ ಕನ್ನಡಿಗರ ಮಕ್ಕಳಿಂದ 'ಗೋಡೆ' ನಾಟಕ ಪ್ರದರ್ಶನ ಚಂಡಿಗಢ ಕನ್ನಡ ಸಂಘದ ಮಕ್ಕಳಿಂದ 'ಆಗಸ್ಟ್ ಕ್ರಾಂತಿ' ನಾಟಕ ಪ್ರದರ್ಶನಗಳಿವೆ. ಸ್ಥಳ; ಮೊಹಾಲಿಯ ಪ್ರಾಚೀನ ಕಲಾಕೇಂದ್ರ ಸೆಕ್ಟರ್, 71. ಐ.ವಿ.ವೈ ಆಸ್ಪತ್ರೆ ಹತ್ತಿರ, ಮೊಹಾಲಿ -160 071.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X