ಕರುಣಾಕರರೆಡ್ಡಿ ನಿವಾಸದಲ್ಲಿ ನಾಗರಾಜ ಪ್ರತ್ಯಕ್ಷ!
ಬಿಜೆಪಿ ಆಂತರಿಕ ವಲಯದಲ್ಲಿ ದಿನಕ್ಕೊಂದು ರೀತಿ ತಿರುವು ಪಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ಶಕುನ-ಅಪಶಕುನದ ಬಗ್ಗೆ ಲಘು ಚರ್ಚೆಗೆ ಕಾರಣವಾಗಿದೆ. ಸಿಎಂ ಮನೆಗೆ ಅಂಟಿಕೊಂಡಿರುವ ರೆಡ್ಡಿ ನಿವಾಸದಲ್ಲಿ ಭಾನುವಾರ (ನ.1) ಸಂಜೆ ನಾಗರಹಾವು ಕಾಣಿಸಿಕೊಂಡಿತು ನಂತರ ಉರಗ ಪ್ರೇಮಿಯೊಬ್ಬರು ಹಾವನ್ನು ತೆಗೆದುಕೊಂಡು ಹೋದರು. ರೆಡ್ಡಿ ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿದ್ದರು.
ಹಾವು ಕಾಣಿಸಿಕೊಂಡ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ನಂಬಿಕೆಗಳಿವೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದಲ್ಲಿ ಹಾವು ಕಾಣಿಸಿಕೊಂಡಾಗ ವಿಶೇಷ ಪೂಜೆ, ಹೋಮ-ಹವನ ನಡೆಸಲಾಗಿತ್ತು. ರಾಜಕೀಯವಾಗಿ ಲಾಭ ನಷ್ಟದ ವಿಚಾರ ಹೇಳಲಾಗದು, ಆದರೆ ಸೂರ್ಯನ ಚಲನೆಯಂತೆ ಮನೆ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡರೆ ಮನೆ ಯಜಮಾನನಿಗೆ ಒಳ್ಳೆದಲ್ಲ, ಒಂದು ವರ್ಷದೊಳಗೆ ಅಪಘಾತವಾಗುವ ಸಂಭವಗಳು ಹೆಚ್ಚು, ಮನೆ ದೋಷವೂ ಇದಕ್ಕೆ ಕಾರಣವಿರಬಹುದೆಂದು ಹೊಸನಗರದ ಖ್ಯಾತಿ ಜ್ಯೋತಿಷಿ ವೇದಬ್ರಹ್ಮ ನಾರಾಯಣ ಜೋಯ್ಸ್ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)