ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾಕರರೆಡ್ಡಿ ನಿವಾಸದಲ್ಲಿ ನಾಗರಾಜ ಪ್ರತ್ಯಕ್ಷ!

|
Google Oneindia Kannada News

Snake scare at Reddy’s house
ಬೆಂಗಳೂರು, ನ. 2 : ಕಾಕತಾಳೀಯವೆಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀಕ್ಷೇತ್ರ ಕುಕ್ಕೇ ಸುಬ್ರಮಣ್ಯದಲ್ಲಿ ಪೂಜೆ ಸಲ್ಲಿಸಿ ವಾಪಸಾದ ಮರುದಿನವೇ ಕಂದಾಯ ಸಚಿವ ಗಾಲಿ ಕರುಣಾಕರ ರೆಡ್ಡಿ ಅವರ ಅಧಿಕೃತ ನಿವಾಸದಲ್ಲಿ 'ನಾಗರಾಜ' ಕಾಣಿಸಿಕೊಂಡಿದ್ದಾನೆ. ಇದು ರೆಡ್ಡಿ ಸಹೋದರರಿಗೆ ಅನಿಷ್ಟದ ಸೂಚನೆ ಎಂದು ಜ್ಯೋತಿಷಿಗಳ ಅಭಿಪ್ರಾಯ.

ಬಿಜೆಪಿ ಆಂತರಿಕ ವಲಯದಲ್ಲಿ ದಿನಕ್ಕೊಂದು ರೀತಿ ತಿರುವು ಪಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ಶಕುನ-ಅಪಶಕುನದ ಬಗ್ಗೆ ಲಘು ಚರ್ಚೆಗೆ ಕಾರಣವಾಗಿದೆ. ಸಿಎಂ ಮನೆಗೆ ಅಂಟಿಕೊಂಡಿರುವ ರೆಡ್ಡಿ ನಿವಾಸದಲ್ಲಿ ಭಾನುವಾರ (ನ.1) ಸಂಜೆ ನಾಗರಹಾವು ಕಾಣಿಸಿಕೊಂಡಿತು ನಂತರ ಉರಗ ಪ್ರೇಮಿಯೊಬ್ಬರು ಹಾವನ್ನು ತೆಗೆದುಕೊಂಡು ಹೋದರು. ರೆಡ್ಡಿ ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿದ್ದರು.

ಹಾವು ಕಾಣಿಸಿಕೊಂಡ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ನಂಬಿಕೆಗಳಿವೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದಲ್ಲಿ ಹಾವು ಕಾಣಿಸಿಕೊಂಡಾಗ ವಿಶೇಷ ಪೂಜೆ, ಹೋಮ-ಹವನ ನಡೆಸಲಾಗಿತ್ತು. ರಾಜಕೀಯವಾಗಿ ಲಾಭ ನಷ್ಟದ ವಿಚಾರ ಹೇಳಲಾಗದು, ಆದರೆ ಸೂರ್ಯನ ಚಲನೆಯಂತೆ ಮನೆ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡರೆ ಮನೆ ಯಜಮಾನನಿಗೆ ಒಳ್ಳೆದಲ್ಲ, ಒಂದು ವರ್ಷದೊಳಗೆ ಅಪಘಾತವಾಗುವ ಸಂಭವಗಳು ಹೆಚ್ಚು, ಮನೆ ದೋಷವೂ ಇದಕ್ಕೆ ಕಾರಣವಿರಬಹುದೆಂದು ಹೊಸನಗರದ ಖ್ಯಾತಿ ಜ್ಯೋತಿಷಿ ವೇದಬ್ರಹ್ಮ ನಾರಾಯಣ ಜೋಯ್ಸ್ ಅಭಿಪ್ರಾಯಪಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X