ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೆಟ್ಟರ್, ರೆಡ್ಡಿಗೆ ಹೈಕಮಾಂಡ್ ಬುಲಾವ್
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲೇಬೇಕು ಎಂದು ನಿರ್ಧರಿಸಿರುವ ರೆಡ್ಡಿ ಸಹೋದರರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಇತ್ತ ಜಗದೀಶ್ ಶೆಟ್ಟರ್ ಅವರಿಗೆ ಪರ್ಯಾಯ ನಾಯಕತ್ವ ವಹಿಸಿಕೊಳ್ಳಿ ಎಂದು ಶಾಸಕರ ಒಂದು ವಲಯದಿಂದ ಕೇಳಿ ಬರುತ್ತಿರುವುದರಿಂದ ರಾಜ್ಯ ರಾಜಕೀಯ ತೀವ್ರ ಗೊಂದಲ ಗೂಡಾಗಿದೆ. ಅತ್ತ ಅರುಣ್ ಜೈಟ್ಲಿ ಅವರ ಮಾತಿಗೂ ಸೊಪ್ಪು ಹಾಕದ ರೆಡ್ಡಿಗಳು ಸಿಎಂ ಅವರನ್ನು ಹೊರಗಿಟ್ಟು ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ನವಗ್ರಾಮ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಇಂದು ಕೂಡಾ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮದರಗೋಳ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಕರುಣಾಕರರೆಡ್ಡಿ ಮತ್ತು ಜನಾರ್ದನರೆಡ್ಡಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಡಿಯೂರಪ್ಪ ಅವರನ್ನು ತೆಗೆದುಹಾಕುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಇಂದು ಕೂಡಾ ರವಾನಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
yediyurappa ಯಡಿಯೂರಪ್ಪ ಕರುಣಾಕರರೆಡ್ಡಿ ಜನಾರ್ದನ ರೆಡ್ಡಿ jagadish shettar ಜಗದೀಶ್ ಶೆಟ್ಟರ್ ಅರುಣ್ ಜೇಟ್ಲಿ rift in bjp ಬಿಜೆಪಿ ಬಿರುಕು janardhana reddy
Story first published: Friday, October 30, 2009, 16:44 [IST]