ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದ್ದುಬಿದ್ದು ಗಹಗಹಿಸಿ ನಕ್ಕ ಮಾನ್ಯ ದೇವೇಗೌಡರು

|
Google Oneindia Kannada News

Devegowda smiles as political drama unfolds in Karnataka
ಬೆಂಗಳೂರು, ಅ. 28 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಂಥ ಜೋಕಿಗೂ ನಗುವುದಿಲ್ಲ. ನಗುವುದು ಹೋಗಲಿ ಮುಗುಳ್ನಗುವುದೂ ಇಲ್ಲ. ಎಂಥದೇ ತಮಾಷೆಯ ವಿಷಯವಿದ್ದರೂ ಗಂಭೀರವದನರಾಗಿಯೇ ಇರುತ್ತಾರೆ. ಇನ್ನು ಗಂಭೀರ ವಿಷಯವಾಗಿದ್ದರಂತೂ ತಮ್ಮ ಎಂದಿನ 'ದೀರ್ಘ ಚಿಂತನೆ'ಗೆ ಜಾರಿಬಿಡುತ್ತಾರೆ.

ಈ ಎಲ್ಲ ಅವರ ಬಗೆಗಿನ ಅನಿಸಿಕೆಗಳನ್ನು ದೇವೇಗೌಡರು ಸುಳ್ಳುಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ ಗಹಗಹಿಸಿ ನಕ್ಕಿದ್ದಾರೆ, ಎದ್ದುಬಿದ್ದು ನಕ್ಕಿದ್ದಾರೆ. ಅವರ ಮೊಗದಲ್ಲಿ ಇಂಥ ಬಗೆಯ ನಗುವನ್ನು ನೋಡಿ ಯಾವ ಕಾಲವಾಗಿತ್ತೋ? ಅವರನ್ನು ಈ ರೀತಿ ನಗುವಲು ಕಾರಣವಾಗಿದ್ದು, ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಮತ. ಅದು ಜೋಕಲ್ಲ ಅಂತ ಅವರಿಗೆ ಖಂಡಿತ ಗೊತ್ತು.

ಜನಾರ್ಧನ ರೆಡ್ಡಿ ಮತ್ತು ಯಡಿಯೂರಪ್ಪ ನಡುವಿನ ಕದನ ಕುತೂಹಲ ತಾರಕಕ್ಕೇರಿರುವುದನ್ನು ಸೈಡ್ ವಿಂಗ್ ನಿಂದಲೇ ನೋಡುತ್ತಿದ್ದ ಜೆಡಿಎಸ್ ರಾಷ್ಟ್ರನಾಯಕ ದೇವೇಗೌಡ ಪ್ರಥಮ ಬಾರಿಗೆ ತಮ್ಮ ಅನಿಸಿಕೆಗಳನ್ನು ಹೊರಗೆಡಹಿದ್ದಾರೆ. ಎರಡು ಬಣಗಳ ನಡುವಿನ ತಿಕ್ಕಾಟ ಜೋರಾದಾಗ ಬೆಂಕಿ ತಾನಾಗಿಯೇ ಹತ್ತುತ್ತದೆ ಎಂದು ತಣ್ಣಗಿನ ಮಾತಲ್ಲಿ ಹೇಳಿದ್ದಾರೆ.

ಆಪರೇಷನ್ ಕಮಲ ಪ್ರಾರಂಭವಾದಾಗ ಮುಂಚೂಣಿಯಲ್ಲಿದ್ದಿದ್ದೇ ರೆಡ್ಡಿ ಬ್ರದರ್ಸ್. ಸರಕಾರ ಉಳಿಯಲು ಅವರೇ ಕಾರಣ. ಇಲ್ಲದಿದ್ದರೆ ಯಡಿಯೂರಪ್ಪನವರ ಸರಕಾರ ಮೈನರ್ ಗೌವರ್ನಮೆಂಟ್ ಎಂದು ವ್ಯಂಗ್ಯವಾಡಿದ್ದಾರೆ ಗೌಡರು. ಈಗ ರೆಡ್ಡಿಗಳ ವಿರುದ್ಧವೇ ಯಡಿಯೂರಪ್ಪ ಸೆಡ್ಡುಹೊಡೆದಿರುವುದು ಸಹಜವಾಗಿ ಅವರಿಂದ ಈ ಮಾತುಗಳನ್ನು ಹೊರಡಿಸಿದೆ ಮತ್ತು ನಗುವ ಸರದಿ ದೇವೇಗೌಡರದಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X