ಮಹಾರಾಷ್ಟ್ರ, ಗೆದ್ದ 'ಪಂಚ ಕನ್ನಡಿಗರು'
ಮಹಾರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎನ್ನುವ ಬಿಜೆಪಿ-ಶಿವಸೇನೆಯ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಮತ್ತೆ ಪಾರಮ್ಯ ಮರೆದಿದೆ. ಸತತ ಮೂರನೇ ಬಾರಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದ ಗದ್ದುಗೆ ಏರಿದಂತಾಗಿದೆ. ಆದರೆ, ಈ ಸಲದ ವಿಶೇಷವೆಂದರೆ ಮಹಾರಾಷ್ಟ್ರ ವಿಧಾನಸಭೆಗೆ ಐವರು ಕನ್ನಡಿಗರು ಪ್ರವೇಶ ಪಡೆದಿರುವುದು ಸಂತಸದ ಸಂಗತಿ. ಈ ಪೈಕಿ ನಾಲ್ವರು ಉಡುಪಿ ಜಿಲ್ಲೆಯವರಾಗಿದ್ದಾರೆ.
1.
ಸುರೇಶ್
ಶೆಟ್ಟಿ
ಪಕ್ಷ
-
ಕಾಂಗ್ರೆಸ್
ಕ್ಷೇತ್ರ
-
ಅಂಧೇರಿ
ಪೂರ್ವ
ಮಹಾರಾಷ್ಟ್ರ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲದವರು. 2004ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
2.
ಜಗನ್ನಾಥ್
ಶೆಟ್ಟಿ
ಪಕ್ಷ
-
ಕಾಂಗ್ರೆಸ್
ಕ್ಷೇತ್ರ
-
ಸಯಾನ್
ಕೋಲಿವಾಡ
ಉಡುಪಿ
ಜಿಲ್ಲೆ
ಕಾಪುವಿನವರಾದ
ಜಗನ್ನಾಥ್
ಈ
ಕ್ಷೇತ್ರದಿಂದ
ಸತತ
ಎರಡನೇ
ಬಾರಿ
ಆಯ್ಕೆಯಾಗಿದ್ದಾರೆ.
3.
ಕೃಷ್ಣ
ಹೆಗ್ಡೆ
ಪಕ್ಷ
-
ಕಾಂಗ್ರೆಸ್
ಕ್ಷೇತ್ರ
-
ಪೂರ್ವ
ವಿಲೆಪಾರ್ಲೆ
ಮುಂಬೈನ
ಮಾಜಿ
ಮೇಯರ್
ಮತ್ತು
ಶಿವಸೇನೆಯ
ಮಾಜಿ
ಶಾಸಕ
ರಮೇಶ್
ಪ್ರಭು
ಅವರ
ಅಳಿಯರಾಗಿರುವ
ಕೃಷ್ಣ
ಹೆಗ್ಡೆ,
ಉಡುಪಿ
ಜಿಲ್ಲೆ
ಕಾರ್ಕಳ
ತಾಲೂಕಿನವರು.
4.
ಗೋಪಾಲ್
ಶೆಟ್ಟಿ
ಪಕ್ಷ
-
ಬಿಜೆಪಿ
ಕ್ಷೇತ್ರ
-
ಬೋರಿವಲಿ
ಈ
ಕ್ಷೇತ್ರದಿಂದ
ಎರಡನೇ
ಬಾರಿಗೆ
ಆಯ್ಕೆಯಾಗುತ್ತಿರುವ
ಇವರು
ಉಡುಪಿ
ಜಿಲ್ಲೆ
ಪಡುಬಿದ್ರೆ
ಮೂಲದವರು.
ಮುಂಬೈ
ಮಹಾನಗರಿಯ
ಉಪಮೇಯರ್
ಆಗಿದ್ದ
ಏಕೈಕ
ಕನ್ನಡಿಗ
ಎಂಬ
ಹೆಗ್ಗಳಿಕೆಗೆ
ಪಾತ್ರರಾಗಿದ್ದವರು.
5.
ಗಿಲ್ಬರ್ಟ್
ಜಾನ್
ಮೆಂಡೋನಾ
ಪಕ್ಷ
-
ಎನ್ಸಿಪಿ
ಕ್ಷೇತ್ರ
-
ಮೀರಾ
ಭಯಂದರ್
ಮಿನಿ
ಮಂಗಳೂರು
ಎಂದೇ
ಖ್ಯಾತಿಯಾಗಿರುವ
ಮೀರಾ
ರಸ್ತೆ
ಈ
ಕ್ಷೇತ್ರದ
ವ್ಯಾಪ್ತಿಯಲ್ಲಿ
ಬರುತ್ತದೆ.
ತುಳು,
ಕನ್ನಡಿಗ
ಮತ್ತು
ಕೊಂಕಣಿ
ಜನರೊಂದಿಗೆ
ಮೆಂಡೋನಾ
ಉತ್ತಮ
ಸಂಬಂಧಹೊಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)