ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನದಲ್ಲಿ ತಿಮ್ಮಪ್ಪನಿಗೆ 28 ಲಕ್ಷ ಆದಾಯ

|
Google Oneindia Kannada News

Tirupati Balaji
ತಿರುಪತಿ ಅ 22: ಏಳು ಬೆಟ್ಟದ ಒಡೆಯ ವಿಶ್ವದ ಅತಿ ಶ್ರೀಮಂತ ದೇವರು ವೆಂಕಟೇಶ ದಿನದಿಂದ ದಿನಕ್ಕೆ ಶ್ರೀಮಂತನಾಗುತ್ತಲೇ ಇದ್ದಾನೆ. ತಿಮ್ಮಪ್ಪನ ದರ್ಶನಕ್ಕೆ ಟಿಟಿಡಿ ಆಡಳಿತ ಮಂಡಳಿ ಬುಧವಾರದಿಂದ (ಅ. 21) ಹೊಸದಾಗಿ ಜಾರಿಗೆ ತಂದಿದ್ದ 'ಶೀಘ್ರ ದರ್ಶನ' ಟಿಕೆಟ್ ನಿಂದ ಒಂದೇ ದಿನದಲ್ಲಿ 28 ಲಕ್ಷ ರುಪಾಯಿ ಜಮಾವಣೆಗೊಂಡಿದೆ.

ನೂರು ರೂಪಾಯಿ ಬೆಲೆಯ ಮತ್ತು ಇನ್ನೂರು ರೂಪಾಯಿ ಬೆಲೆಯ 'ಅರ್ಚನಾನ೦ತರ ದರ್ಶನ' ಟಿಕೆಟ್ ಪದ್ದತಿಯನ್ನು ರದ್ದುಗೊಳಿಸಿ ಮುನ್ನೂರು ರೂಪಾಯಿ ಬೆಲೆಯ 'ಶೀಘ್ರ ದರ್ಶನ' ವ್ಯವಸ್ಥೆಯನ್ನು ಆಡಳಿತ ಮಂಡಳಿ ಆರಂಭಿಸಿತ್ತು. ಬುಧವಾರದ ದಿನ ಅಷ್ಟೇನೂ ಜನಜಂಗುಳಿ ಇಲ್ಲದಿದ್ದರೂ ಈ ಟಿಕೆಟ್ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಟಿಕೆಟ್ ಅನ್ನು ಮೊದಲ ಐದು ಗಂಟೆಯಲ್ಲಿ ಆರು ಸಾವಿರ ಯಾತ್ರಾರ್ಥಿಗಳು ಪಡೆದುಕೊಂಡಿದ್ದರು.

ದರ್ಶನಕ್ಕೆ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಈ ಪದ್ಧತಿ ಜಾರಿಗೊಳಿಸಲಾಗಿದೆ. ಕೆಲವೊಂದು ವರ್ಗದ ಜನರಿಗೆ ಇದು ದುಬಾರಿ ಎನಿಸಿದರೂ ಒಟ್ಟಾರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಟಿಟಿಡಿ ಅಧ್ಯಕ್ಷ ಆದಿಕೇಶವಲು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X