ಅರುಣಾಚಲ ಪ್ರದೇಶ ನಮ್ಮ ಸ್ವತ್ತು : ರಾವ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದರು. ಟಿಬೇಟಿಯನ್ನರ ಗುರು ದಲೈ ಲಾಮಾ ಅವರು ಅರುಣಾಚಲ ಪ್ರದೇಶದ ತವಾಂತ್ ಜಿಲ್ಲೆಗೆ ಭೇಟಿ ನೀಡಿರುವುದಕ್ಕೆ ಚೀನಾ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇದು ಚೀನಾ ಸರಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ವಿಷಯದಲ್ಲಿ ಭಾರತದ ನಿರ್ಧಾರ ಅಚಲ. ಅದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಭಾರತದ ಯಾವುದೇ ಸ್ಥಳದಲ್ಲಿ ದಲೈ ಲಾಮಾ ಅವರಿಗೆ ಅವಕಾಶವಿದೆ. ಅದನ್ನು ಭಾರತ ಸರಕಾರ ಅನುಮತಿ ಮೇರೆಗೆ ನಡೆಸಿಕೊಂಡ ಬರಲಾಗಿದೆ. ಹೀಗಿದ್ದಾಗಲೂ ಚೀನಾ ಅರುಣಾಚಲ ಪ್ರದೇಶದ ಬಗ್ಗೆ ವಿನಾಕರಣ ಸಮಸ್ಯೆ ತೆಗೆಯುತ್ತಿರುವುದು ಸರಿಯಲ್ಲ ಎಂದು ರಾವ್ ಹೇಳಿದರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸಲುವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದು ಚೀನಾ ಅಸಮಾಧಾನಕ್ಕೆ ಕಾರಣವಾಗಿತ್ತು. ವಿವಾದಿತ ಪ್ರದೇಶವಾಗಿದ್ದರಿಂದ ಭಾರತ ಸರಕಾರ ಅಲ್ಲಿಗೆ ಬರಕೂಡದು ಎಂದು ಚೀನಾದ ವಾದವಾಗಿದೆ. ಚೀನಾ ಹೇಳಿಕೆಗೆ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಕಳವಳ ವ್ಯಕ್ತಪಡಿಸಿದ್ದರು. ಅರುಣಾಚಲ ಪ್ರದೇಶ ಭಾರತ ಅವಿಭಾಜ್ಯ ಅಂಗವೆಂದು ಅವರು ಕೂಡಾ ಸ್ಪಷ್ಟಪಡಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ದಲೈ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ.
(ಏಜನ್ಸೀಸ್)