ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ಎಣಿಸಿಯೆಣಿಸಿ ಯಡ್ಡಿ ಸುಸ್ತು

|
Google Oneindia Kannada News

HD Revanna
ಬೆಂಗಳೂರು ಅ 14 : ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಿ ಜಿಂದಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ಪಾದಯಾತ್ರೆಯಲ್ಲಿ ಸಿಎಂ 700 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಇದೇನು ಸಾಮಾನ್ಯವೇ, ನೋಟುಗಳನ್ನು ಎಣಿಸಿ ಎಣಿಸಿ ಪಾಪ ಅವರಿಗೆ ಆಯಾಸವಾಗಿದೆ ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.

ದೇಶವೇ ತಲೆ ಮೇಲೆ ಬಿದ್ದಂತೆ ಸಿಎಂ ವರ್ತಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಸಭೆಗಳನ್ನು ನಡೆಸುವ ಬದಲು ಹಳ್ಳಿಗಳಿಗೆ ಹೋಗಬಾರದೇ ? ಆದರೂ ದೇಣಿಗೆ ಸಂಗ್ರಹಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರವಾಹದಿಂದ ಬೆಳೆ ಕಳೆದುಕೊಡವರಿಗೆ ಪರಿಹಾರ ವಿತರಿಸಲು ಮಾರ್ಗ ಸೂಚಿ ನೋಡುವ ಸರಕಾರ ಮಠಗಳಿಗೆ ಹಣ ಕೊಡುವಾಗ ಯಾವ ನಿಯಮ ಅನುಸರಿಸಿತ್ತು?ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ಗದಗ ಜಿಲ್ಲೆಯ ಗಂಜಿ ಕೇಂದ್ರವೊಂದಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಗಂಜಿ ಕುಡಿದು ಫೋಟೋ ತೆಗೆಸಿಕೊಂಡರು. ಅವರು ಅಲ್ಲಿಂದ ನಿರ್ಗಮಿಸಿದ ಎರಡು ಗಂಟೆಯಲ್ಲಿ ಆ ಗಂಜಿ ಕೇಂದ್ರವೇ ಬಂದ್ ಆಗಿದೆ. ಪರಿಹಾರ ವಿತರಣೆಯಲ್ಲಿ ಸರಕಾರ ಪಕ್ಷ ಮತ್ತು ಜಾತಿ ರಾಜಕೀಯ ಮಾಡುತ್ತಿದೆ ಎಂದು ರೇವಣ್ಣ ದೂರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X