ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಹುಲ್ ಗ್ರಾಮ ವಾಸ್ತವ್ಯ ಆರ್ಎಸ್ಎಸ್ ಶ್ಲಾಘನೆ
ಪ್ರತಿಯೊಬ್ಬ ಭಾರತೀಯನು ಹಳ್ಳಿಗಳಿಗೆ ಹೋಗಬೇಕು. ಹಳ್ಳಿಗಳ ಬಗ್ಗೆ ಮಾತನಾಡಬೇಕು. ಅದರಲ್ಲಿ ತಪ್ಪೇನೂ ಇಲ್ಲ ಎಂದು ಆರ್ಎಸ್ಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಮೋಹನ್ ವೈದ್ಯ ಹೇಳಿದ್ದಾರೆ. ಅಮೇಥಿ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಇತ್ತೀಚೆಗೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ದಲಿತರ ಮನೆಗೆ ಭೇಟಿ ನೀಡಿದ್ದ ರಾಹುಲ್ ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಇದು ಉತ್ತರ ಪ್ರದೇಶದಲ್ಲಿ ಭಾರಿ ಚರ್ಚೆ ಕಾರಣವಾಗಿತ್ತು. ಮುಖ್ಯಮಂತ್ರಿ ಮಾಯಾವತಿ ಹಾಗೂ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೊಂದು ರಾಜಕೀಯ ತಂತ್ರ ಎಂದು ಆರೋಪಿಸಲಾಗಿತ್ತು.
(ಏಜನ್ಸೀಸ್)
Comments
Story first published: Sunday, October 11, 2009, 12:49 [IST]