ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದತ್ತಪೀಠ ದುರಸ್ತಿಗೆ ಮಧ್ಯಂತರ ತಡೆ
ಚಂದ್ರದ್ರೋಣ ಬೆಟ್ಟದ ಸಾಲಿನಲ್ಲಿರುವ ದತ್ತ ಪೀಠ ಇತ್ತೀಚೆಗೆ ಕುಸಿದಿತ್ತು. ಕಾಮಗಾರಿ ನಡೆಯುತ್ತಿತ್ತು. ಇದಲ್ಲದೆ ದತ್ತ ಪೀಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಸಿ ಟಿ ರವಿ ಮತ್ತಿತರರು ಧಾರ್ಮಿಕ ವಿಧಿವಿಧಾನ ನೆರವೇರಿಸಿದ್ದರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಆದೇಶವಿದ್ದರೂ ಪೂಜೆ ಸಲ್ಲಿಸಿ, ಕಾಮಗಾರಿ ನಡೆಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಪೀಠವು ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಹೈಕೋರ್ಟ್ ks eshwarappa ಚಿಕ್ಕಮಗಳೂರು ಕೆಎಸ್ ಈಶ್ವರಪ್ಪ ಸಿಟಿ ರವಿ ct ravi ದತ್ತಪೀಠ bababudangiri ದುರಸ್ತಿ sadananda gowda
Story first published: Wednesday, October 7, 2009, 11:06 [IST]