ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಾಲಯ : ನೀರಲ್ಲಿ ಮುಳುಗಿದ ರಾಯರ ಮಠ

|
Google Oneindia Kannada News

Mantralya
ರಾಯಚೂರು, ಅ. 2 : ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯವನ್ನು ತುಂಗಭದ್ರಾ ನದಿ ನೆರೆ ಸುತ್ತುವರಿದಿದ್ದು, ದ್ವೀಪವಾಗಿ ಮಾರ್ಪಟ್ಟಿದೆ. ಮಂತ್ರಾಲಯದ ರಂಗ ಭವನ, ತುಳಸಿ ವೃಂದಾವನ ಜಲಾವೃತವಾಗಿದ್ದು, ಅನ್ನಪೂರ್ಣ ಭೋಜನ ಶಾಲೆವರೆಗೆ ನದಿ ನೀರು ತಲುಪಿದೆ.

ನಾಲ್ಕು ವೃಂದಾವನಗಳು ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದ್ದು, ರಾಯರ ಬೃಂದಾವನದಲ್ಲಿಯೂ ಒಂದು ಅಡಿ ಮಟ್ಟಕ್ಕೆ ನೀರು ಸುತ್ತುವರಿದಿದೆ. ಈ ಹಿನ್ನೆಲೆಯಲ್ಲಿ ಗೋವುಗಳನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗಿದೆ. ಪೂರ್ಣಮಠ, ಪ್ರಕಾರ ಬೋಜನೆ ಶಾಲೆಯನ್ನು ಮೊದಲ ಮಹಡಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ಥರಾಗಿರುವ ನಗರದ 6 ಸಾವಿರ ಜನರಿಗೆ ಮಠದಿಂದ ಗುರುವಾರ ರಾತ್ರಿಭೋಜನ ವ್ಯವಸ್ಥೆ ಮಾಡಲಾಗಿತ್ತು.

ರಾಯಚೂರು-ಮಂತ್ರಾಲಯ ಅಂತಾರಾಜ್ಯ ಹೆದ್ದಾರಿ ಜಲಾವೃತವಾಗಿದ್ದು ಸಂಚಾರ ಸ್ಥಗಿತವಾಗಿದೆ. ಇದುವರೆವಿಗೂ ಆಹಾರ ನೀರಿಲ್ಲದೆ ಜನರು ಪ್ರಾಣಭೀತಿಯಿಂದ ನರಳುತ್ತಿದ್ದಾರೆ. ಜಿಲ್ಲಾಡಳಿತದಿಂದ ಯಾವುದೇ ನೆರವಿನ ಹಸ್ತ ದೊರೆತಿಲ್ಲ ಎಂದು ಮಂತ್ರಾಲಯದಿಂದ ರಘುನಂದನಾಚಾರ್ಯ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X