ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗ ಬಳಿಯ ಹೊಸಗುಂದಕ್ಕೆ ರಾಹುಲ್ ಗಾಂಧಿ
ಹೊಸಗುಂದದಲ್ಲಿರುವ ಪ್ರಗತಿಪರ ಕೃಷಿಕ ಸಿ ಎಂ ಎನ್ ಶಾಸ್ತ್ರಿ ಅವರ ತೋಟಕ್ಕೆ ತೆರಳಲು ರಾಹುಲ್ ಮನಸ್ಸು ಮಾಡಿದ್ದಾರೆ. ಈ ಮೂಲಕ ಈ ಭಾಗದ ಕೃಷಿ ಚಟುವಟಿಕೆ, ಹಳ್ಳಿಗರ ಜೀವನದ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ, ಮುಂದಿನ ತಿಂಗಳು ರಾಹುಲ್ ಈ ಪ್ರದೇಶಕ್ಕೆ ಭೇಟಿಯಾಗಬಹುದು ಎಂದು ಸಿ ಎಂ ಎನ್ ಶಾಸ್ತ್ರಿ ಮಾಲೀಕತ್ವದ 'ಫಲದಕೃಷಿ ಪ್ರತಿಷ್ಠಾನ' ದ ವ್ಯವಸ್ಥಾಪಕಿ ವಿಜಯಲಕ್ಷ್ಮಿ ರಾಜೇಶ್ 'ವಿಜಯ ಕರ್ನಾಟಕ' ಪತ್ರಿಕೆಗೆ ತಿಳಿಸಿದ್ದಾರೆ.
ಕೃಷಿ ಅಭಿವೃದ್ದಿ, ಅರಣ್ಯ ಸಂರಕ್ಷಣೆ, ಗ್ರಾಮೀಣ ಸೊಗಡಿನ ದೃಷ್ಟಿಯಿಂದ ಹೊಸಗುಂದ ಮಹತ್ವ ಪಡೆದುಕೊಂಡಿದೆ. ಗ್ರಾಮ ಭಾರತದ ಕಲ್ಪನೆಗೆ ಹೊಸ ದಿಕ್ಕು, ಸ್ಫೂರ್ತಿ ಪಡೆದುಕೊಳ್ಳಲು ಕಾಂಗ್ರೆಸ್ ಯುವರಾಜ ಈ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದಾರೆನ್ನಲಾಗಿದೆ.
(ದಟ್ಸ್ ಕನ್ನಡವಾರ್ತೆ)
Comments
Story first published: Wednesday, September 23, 2009, 14:39 [IST]