ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಬಳಿಯ ಹೊಸಗುಂದಕ್ಕೆ ರಾಹುಲ್ ಗಾಂಧಿ

By Staff
|
Google Oneindia Kannada News

Rahul gandhi
ನವದೆಹಲಿ, ಸೆ. 23: ಗ್ರಾಮೀಣ ಭಾರತದ ನಾಡಿಮಿಡಿತ ಅರಿಯುವ ಪ್ರಯತ್ನಕ್ಕೆ ಮುಂದಾಗಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಮಾರ್ಗ ಮಧ್ಯೆ ಇರುವ ಹೊಸಗುಂದಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಮಿತ್ರ ಬ್ರಿಜೇಂದ್ರ ಶುಕ್ಲಾ ಎರಡು ದಿನ ಹೊಸಗುಂದದಲ್ಲಿ ತಂಗಿ, ರಾಹುಲ್ ಬರುವಿಕೆಯನ್ನು ಖಚಿತ ಪಡಿಸಿದ್ದಾರೆ.

ಹೊಸಗುಂದದಲ್ಲಿರುವ ಪ್ರಗತಿಪರ ಕೃಷಿಕ ಸಿ ಎಂ ಎನ್ ಶಾಸ್ತ್ರಿ ಅವರ ತೋಟಕ್ಕೆ ತೆರಳಲು ರಾಹುಲ್ ಮನಸ್ಸು ಮಾಡಿದ್ದಾರೆ. ಈ ಮೂಲಕ ಈ ಭಾಗದ ಕೃಷಿ ಚಟುವಟಿಕೆ, ಹಳ್ಳಿಗರ ಜೀವನದ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ, ಮುಂದಿನ ತಿಂಗಳು ರಾಹುಲ್ ಈ ಪ್ರದೇಶಕ್ಕೆ ಭೇಟಿಯಾಗಬಹುದು ಎಂದು ಸಿ ಎಂ ಎನ್ ಶಾಸ್ತ್ರಿ ಮಾಲೀಕತ್ವದ 'ಫಲದಕೃಷಿ ಪ್ರತಿಷ್ಠಾನ' ದ ವ್ಯವಸ್ಥಾಪಕಿ ವಿಜಯಲಕ್ಷ್ಮಿ ರಾಜೇಶ್ 'ವಿಜಯ ಕರ್ನಾಟಕ' ಪತ್ರಿಕೆಗೆ ತಿಳಿಸಿದ್ದಾರೆ.

ಕೃಷಿ ಅಭಿವೃದ್ದಿ, ಅರಣ್ಯ ಸಂರಕ್ಷಣೆ, ಗ್ರಾಮೀಣ ಸೊಗಡಿನ ದೃಷ್ಟಿಯಿಂದ ಹೊಸಗುಂದ ಮಹತ್ವ ಪಡೆದುಕೊಂಡಿದೆ. ಗ್ರಾಮ ಭಾರತದ ಕಲ್ಪನೆಗೆ ಹೊಸ ದಿಕ್ಕು, ಸ್ಫೂರ್ತಿ ಪಡೆದುಕೊಳ್ಳಲು ಕಾಂಗ್ರೆಸ್ ಯುವರಾಜ ಈ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದಾರೆನ್ನಲಾಗಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X