ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ
ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪಿಡಿ ದಿನಕರನ್ ಅವರು ಅಪಾರ ಅಕ್ರಮ ಆಸ್ತಿ ಗಳಿಸಿದ್ದಾರೆ. ಸುಮಾರು 450 ಎಕರೆ ಜಮೀನನ್ನು ಅವರು ಖರೀದಿಸಿದ್ದಾರೆ. ಜೊತೆಗೆ 500 ಮಂದಿ ಭಾರಿ ಪ್ರಮಾಣದಲ್ಲಿ ಅಪರಾಧ ಎಸಗಿದ ಅರೋಪಿಗಳಿಗೆ ಜಾಮೀನು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹಿರಿಯ ನ್ಯಾಯವಾದಿಗಳಾದ ಶಾಂತಿಭೂಷಣ್, ಪಾಲಿ ನಾರಿಮನ್ ಮತ್ತು ಅನಿಲ್ ದಿವಾನ್ ಅವರುಗಳು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ ಕೆ ಡಿ ಬಾಲಕೃಷ್ಣನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಬಾಲಕೃಷ್ಣನ್ ಅವರು ದಿನಕರನ್ ಅವರಿಗೆ ಸೂಚನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಸುಪ್ರಿಂಕೋರ್ಟ್ veerappa moily ವೀರಪ್ಪ ಮೊಯ್ಲಿ ಕರ್ನಾಟಕ ಹೈಕೋರ್ಟ್ ಪಿಡಿ ದಿನಕರನ್ pd dinakaran ಕೆ ಜಿ ಬಾಲಕೃಷ್ಣನ್ kg balakrishnan ಆಸ್ತಿ ವಿವರ fali nariman
Story first published: Wednesday, September 16, 2009, 12:03 [IST]