ಚರ್ಚ್ ದಾಳಿ : ಸಿಓಡಿ ತನಿಖೆಗೆ ಆದೇಶ
ಘಟನೆ ಕುರಿತು ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಗುರುವಾರ ಸಂಜೆ ವಿಧಾನಸೌಧದಲ್ಲಿ ಹೇಳಿಕೆ ನೀಡಿದ ಅವರು, ಕೆಲ ಸಮಾಜಘಾತುಕ ಶಕ್ತಿಗಳು ರಾಜ್ಯದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದರು. ಆದರೆ, ಪ್ರತಿಪಕ್ಷಗಳು ಮಾತ್ರ ಈ ಘಟನೆಯನ್ನು ಅಸ್ತ್ರವಾಗಿಸಿಕೊಂಡಿದ್ದು, ತೀವ್ರ ವಾಗ್ದಾಳಿ ನಡೆಸಿವೆ. ಸರಕಾರದಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ದಾಳಿಯ ಬಗ್ಗೆ ಸಿಓಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದಕ್ಕೆ ಒಪ್ಪದಿದ್ದರೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ದಾಳಿ ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ನಾಶವಾಗಿದೆ ಎಂದು ರಾಜ್ಯಪಾಲ ಎಚ್ಚ ಆರ್ ಭಾರದ್ವಾಜ್ ಬಹಿರಂಗ ಹೇಳಿಕೆ ನೀಡಿದ್ದರು.
ಕಂಡಲ್ಲಿ
ಗುಂಡು
ಚರ್ಚ್
ಮೇಲೆ
ದಾಳಿ
ನಡೆಸುವವರ
ವಿರುದ್ಧ
ಕಠಿಣ
ಕ್ರಮ
ಜರುಗಿಸುವುದಾಗಿ
ಎಚ್ಚರಿಕೆ
ನೀಡಿರುವ
ನಗರ
ಪೊಲೀಸ್
ಆಯುಕ್ತ
ಶಂಕರ
ಬಿದರಿ,
ದಾಳಿಕೋರರ
ಮೇಲೆ
ಗುಂಡು
ಹಾರಿಸುವಂತೆ
ಆದೇಶಿಸಿದ್ದಾರೆ.
ದಾಳಿ
ಹಿನ್ನೆಲೆಯಲ್ಲಿ
ಚರ್ಚ್
ಗಳಿಗೆ
ಹೆಚ್ಚಿನ
ಭದ್ರತೆ
ಕಲ್ಪಿಸಲಾಗಿದೆ.
ಚರ್ಚ್
ಗಳ
ಒಳಗೆ
ಅತಿಕ್ರಮಣ
ಮಾಡುವ
ಮತ್ತು
ಕಳವು
ಮಾಡಲು
ಯತ್ನಿಸುವವರ
ಮೇಲೆ
ಕಠಿಣ
ಕ್ರಮಕೈಗೊಳ್ಳುವಂತೆ
ಎಲ್ಲ
ಠಾಣೆಗಳಿಗೆ
ಸೂಚನೆ
ನೀಡಲಾಗಿದೆ
ಎಂದು
ಬಿದರಿ
ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)