ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರಿ ಅವರ ಚಿನ್ನದ ವಾಚ್ ಕಳುವು

By Staff
|
Google Oneindia Kannada News

Lal Bahadur Shastri
ನವದೆಹಲಿ, ಸೆ. 10 : ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಬಳಸುತ್ತಿದ್ದ ಅವರ ಕೈಗಡಿಯಾರ ಕಳವಾಗಿರುವ ಘಟನೆ ವರದಿಯಾಗಿದೆ. ರಾಷ್ಟ್ರ ರಾಜಧಾನಿಯ ಭಾರೀ ಬಿಗಿಭದ್ರತೆಯಿರುವ ಪ್ರದೇಶದಲ್ಲೇ ಈ ಘಟನೆ ವರದಿಯಾಗಿದ್ದು, ಶಾಸ್ತ್ರಿಯವರ ಮಗ ಅನಿಲ್ ಶಾಸ್ತ್ರಿ ಸುದ್ದಿ ಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಮತ್ತು ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ನಿವಾಸದ ಸಮೀಪ ಬಿಗಿ ಬಂದೋಬಸ್ತ್ ಇರುವ ಶಾಸ್ತ್ರಿ ಸ್ಮಾರಕ ಭವನದ ಪ್ರದೇಶದಲ್ಲಿ ಕೈಗಡಿಯಾರ ಕಳವಾಗಿದೆ. ಕಳುವಾಗಿರುವ ಘಟನೆ ಸೆಪ್ಟೆಂಬರ್ 3ರಂದು ಬೆಳಕಿಗೆ ಬಂದಿದ್ದರೂ ನಾಲ್ಕು ದಿನ ತಡವಾಗಿ ಪೋಲೀಸರಿಗೆ ದೂರು ನೀಡಲಾಗಿದೆ.

1966 ರಲ್ಲಿ ನಡೆದ ತಾಷ್ಕೆಂಟ್ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ರಷ್ಯಾ ಪ್ರಧಾನಿ ಅಲೆಕ್ಷಿ ಕೊಸಿಗಿನ್ ಶಾಸ್ತ್ರಿಯವರಿಗೆ ಚಿನ್ನದ ರಿಸ್ಟ್ ವಾಚ್ ಅನ್ನು ಉಡುಗೆರೆಯಾಗಿ ನೀಡಿದ್ದರು. ವೈಭವೋಪಿತ ಬದುಕನ್ನು ಇಷ್ಟ ಪಡದ ಶಾಸ್ತ್ರಿ ಈ ವಾಚ್ ಅನ್ನು ತನ್ನ ಮಗ ಅನಿಲ್ ಶಾಸ್ತ್ರಿಗೆ ನೀಡಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X