ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳೆ ಸುಳ್ಳು ಹೇಳಿ : ಎಚ್ಡಿಕೆ

By Staff
|
Google Oneindia Kannada News

HD Kumaraswamy
ಬೆಂಗಳೂರು, ಸೆ. 7 : ಮಾನ್ಯ ಯಡಿಯೂರಪ್ಪನವರೇ, ಸುಳ್ಳು ಹೇಳಿ ನಮ್ಮ ತಕರಾರಿಲ್ಲ. ಆದರೆ ಜನ ನಂಬುವಂಥ ವಾಸ್ತವಕ್ಕೆ ಸ್ವಲ್ಪವಾದರೂ ಹತ್ತಿರವಿರುವ ಸುಳ್ಳುಗಳನಷ್ಟೆ ಹೇಳಿ. ನಾನೀಗ ಲೋಕಸಭೆಯಲ್ಲಿ ಇದ್ದೇನೆ. ಒಂದು ವೇಳೆ ನಾನು ವಿಧಾನಸಭೆಯಲ್ಲೇ ಇದ್ದಿದ್ದರೆ ನಿಮ್ಮ ಸರಕಾರದ ಬಣ್ಣವನ್ನು ಎಳೆಎಳೆಯಾಗಿ ಬಯಲು ಮಾಡುತ್ತಿದ್ದೆ. ನಾಟಕ ನಿಲ್ಲಿಸಿ ನಾಡಿನ ಜನರ ಕಿವಿಗೆ ಹೂವು ಮುಡಿಸುವುದನ್ನು ಕೈಬಿಡಿ. ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ.

ಜೆ ಡಿ ಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಯಡಿಯೂರಪ್ಪಗೆ ಚೀನಾಕ್ಕೆ ಹೋದ ಮೇಲೆ ರಾಜ್ಯದ ಅಭಿವೃದ್ದಿ ಕುರಿತು ಜ್ಞಾನೋದಯವಾಗಿದೆ. ಇವರಿಗೆ ಆಪರೇಷನ್ ಕಮಲಕ್ಕೇ ಸಮಯವಿಲ್ಲ. ನಿತ್ಯ ಆಪರೇಷನ್, ಅಗಾಗ ಚುನಾವಣೆ ನಡೆಯುವುದೆಂದರೆ ಅವರಿಗೆ ಖುಷಿಯೋ ಖುಷಿ. ಇದು ಅನಾಗರಿಕ ಸರಕಾರ ಮತ್ತು ಆಡಳಿತ. ಯಾವ ಪುರುಷಾರ್ಥಕ್ಕೆ ನೀವು ಮೂವತ್ತು ವರ್ಷ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ವಿದೇಶಿ ವಿವಿಯೊಂದು ಗೌರವ ಡಾಕ್ಟರೇಟ್ ನೀಡಿದೆ. ಜತೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮೂರೂ ತಿಂಗಳಿಗೊಮ್ಮೆ ವಿದೇಶ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಕಾಯಂ ಆಗಿ ವಿದೇಶದಲ್ಲೇ ನೆಲೆಗೊಂಡರೂ ರಾಜ್ಯಕ್ಕೆ ನಯಾಪೈಸೆ ಬಂಡವಾಳವನ್ನು ಆಕರ್ಷಣೆ ಮಾಡುವುದಿಲ್ಲ. ಬೇಕಿದ್ರೆ ನಾನು ಸವಾಲು ಹಾಕುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X