ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂತ್ಯಕ್ರಿಯೆಗೆ ಮುನ್ನವೇ ಗದ್ದುಗೆಗೆ ಲಾಬಿ
ವೈ ಎಸ್ ಆರ್ ಉತ್ತರಾಧಿಕಾರಿಯನ್ನಾಗಿ ಜಗನ್ಮೋಹನ್ ಅವರನ್ನೇ ಮಾಡಬೇಕೆಂದು ಆಗಲೇ ಶಾಸಕರ ಸಹಿ ಸಂಗ್ರಹ ಬಿರುಸಿನಿಂದ ನಡೆಯುತ್ತಿದೆ. ಪಕ್ಷದ 122 ಶಾಸಕರು ಇವರ ಪರವಾಗಿ ಸಹಿಯನ್ನು ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅನಂತಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಯನ್ನೂ ನಡೆಸಿದ್ದಾರೆ.
ಜಗನ್ಮೋಹನ್ ಅಲ್ಲದೆ ಹಣಕಾಸು ಸಚಿವ ಮತ್ತು ಹಂಗಾಮಿ ಸಿಎಂ ರೋಶಯ್ಯ, ಕೇಂದ್ರ ಸಚಿವ ಜೈಪಾಲ್ ರೆಡ್ಡಿ, ಆಂಧ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀನಿವಾಸ್, ಎನ್ ಟಿ ಆರ್ ಮಗಳು ಮತ್ತು ಕೇಂದ್ರ ಸಚಿವೆ ಪುರಂದರೇಶ್ವರಿ, ವೈ ಎಸ್ ಆರ್ ಪಾಲಿನ 'ಮಾನಸ ಸಹೋದರಿ' ಗೃಹ ಸಚಿವೆ ಸಬಿತಾ ಅವರ ಹೆಸರುಗಳು ಸಿಎಂ ಪಟ್ಟಕ್ಕಾಗಿ ಮಂಚೂಣಿಯಲ್ಲಿ ಬಂದು ನಿಂತಿವೆ.
ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಹೈಕಮಾಂಡ್ ಸೋನಿಯಾ ಗಾಂಧಿ ಅವರ ಚಿಂತನಾಲಹರಿ ಯಾರಿಗೆ ಒಲಿಯುತ್ತದೋ. ಯಥಾಸ್ಥಿತಿಗೆ ಅಂಟಿಕೊಂಡರೆ, ಜಗನ್ಮೋಹನ್ ರೆಡ್ಡಿಯೇ ಅಪ್ಪನ ಸ್ಥಾನಕ್ಕೆ ಬರುವುದು ನಿಶ್ಚಿತ. ಇದೆಲ್ಲವನ್ನೂ ಲೆಕ್ಕ ಹಾಕಿ ಅವರು ಲಾಬಿಯನ್ನು ಶುರು ಹಚ್ಚಿಕೊಂಡಿದ್ದಾರೆ.
(ಏಜನ್ಸೀಸ್)
Comments
English summary
YS Rajasekhara Reddy