ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿಕ್ಕರೆ ಪೊಲೀಸರಿಗೆ ದೂರು ನೀಡಿ : ರೋಸಯ್ಯ,

By Staff
|
Google Oneindia Kannada News

K Rosaiah
ಹೈದರಾಬಾದ್, ಸೆ. 2 : ಮುಖ್ಯಮಂತ್ರಿ ರಾಜಶೇಖರರೆಡ್ಡಿ ಎಲ್ಲಿದ್ದಾರೆಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಅನೇಕ ಉಪಾಪೋಹಗಳು ಹುಟ್ಟಿಕೊಂಡಿದ್ದು, ಚಿತ್ತೂರು ಬಳಿ ಇರುವ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡ್ ಆಗಿರಬಹುದು. ಆದರೆ, ಒಂದು ಆತಂಕಕಾರಿ ಸಂಗತಿಯೆಂದರೆ ನಲ್ಲಮಲ್ಲ ಅರಣ್ಯ ಪ್ರದೇಶ ಸಂಪೂರ್ಣವಾಗಿ ನಕ್ಸಲ್ ಹಿಡಿತದಲ್ಲಿದೆ ಎನ್ನುವುದು ವಿಶೇಷವಾಗಿದೆ. ಹೆಲಿಕ್ಯಾಪ್ಟರ್ ಕಣ್ಮರೆಯಾಗಿ 7 ಗಂಟೆ ಕಳೆದು ಹೋಗಿದೆ. ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿರುವುದು ಸಿಎಂ ಬಗ್ಗೆ ಸಾಕಷ್ಟು ಅನುಮಾನ ಉಂಟಾಗಿದೆ. 10.13 ನಿಮಿಷಕ್ಕೆ ಸಿಎಂ ಹೆಲಿಕ್ಯಾಪ್ಟರ್ ನಾಪತ್ತೆಯಾಗಿದೆ.

ರಾಜಶೇಖರರೆಡ್ಡಿ ಕಣ್ಮರೆಯಾಗಿರುವುದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಪಿ ಚಿದಂಬರಂ ಅವರು ಸತತ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಕೆ ರೋಸಯ್ಯ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ. 4 ಗಂಟೆ ಆಗಿದ್ದರೂ ಸಿಎಂ ಪತ್ತೆ ಇಲ್ಲ. ಇದರಿಂದ ನಮಗೆ ತೀವ್ರ ಆತಂಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜಶೇಖರರೆಡ್ಡಿ ಹೆಲಿಕ್ಯಾಪ್ಟರ್ ಶೋಧ ಕಾರ್ಯಕ್ಕೆ ಸುಮಾರು 10 ಹೆಲಿಕ್ಯಾಪ್ಟರ್ ಗಳು ಕಾರ್ಯಾರಂಭಿಸಿವೆ. ಸಿಎಂ ಕಣ್ಮರೆಯಾಗಿ 5 ಗಂಟೆ ಕಳೆದ ನಂತರ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡಾ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಹುಡುಕಾಟ ಆರಂಭಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X