ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂ ಸಿಕ್ಕರೆ ಪೊಲೀಸರಿಗೆ ದೂರು ನೀಡಿ : ರೋಸಯ್ಯ,
ರಾಜಶೇಖರರೆಡ್ಡಿ ಕಣ್ಮರೆಯಾಗಿರುವುದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಪಿ ಚಿದಂಬರಂ ಅವರು ಸತತ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಕೆ ರೋಸಯ್ಯ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿದ್ದಾರೆ. 4 ಗಂಟೆ ಆಗಿದ್ದರೂ ಸಿಎಂ ಪತ್ತೆ ಇಲ್ಲ. ಇದರಿಂದ ನಮಗೆ ತೀವ್ರ ಆತಂಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಶೇಖರರೆಡ್ಡಿ ಹೆಲಿಕ್ಯಾಪ್ಟರ್ ಶೋಧ ಕಾರ್ಯಕ್ಕೆ ಸುಮಾರು 10 ಹೆಲಿಕ್ಯಾಪ್ಟರ್ ಗಳು ಕಾರ್ಯಾರಂಭಿಸಿವೆ. ಸಿಎಂ ಕಣ್ಮರೆಯಾಗಿ 5 ಗಂಟೆ ಕಳೆದ ನಂತರ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕೂಡಾ ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಹುಡುಕಾಟ ಆರಂಭಿಸಿದ್ದಾರೆ.
(ಏಜನ್ಸೀಸ್)
Comments
ಹೈದರಾಬಾದ್ hyderabad ವೈ ಎಸ್ ರಾಜಶೇಖರರೆಡ್ಡಿ missing kurnool chittoor helicopter ಕರ್ನೂಲ್ ಚಿತ್ತೂರು ಹೆಲಿಕ್ಯಾಪ್ಟರ್ ನಾಪತ್ತೆ ಕೆ ರೋಸಯ್ಯ
Story first published: Wednesday, September 2, 2009, 18:13 [IST]