ರಾಜಶೇಖರರೆಡ್ಡಿ ಹೆಲಿಕ್ಯಾಪ್ಟರ್ ನಾಪತ್ತೆ !
ಇಂದು ಮಳೆ ಮತ್ತು ಗಾಳಿಯಿಂದ ವಿಪರೀತವಾಗಿದ್ದರಿಂದ ವಾತಾವರಣದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಸಿಗ್ನಲ್ ಗಳು ಸಿಕ್ಕದಿರುವುದೇ ಈ ಆತಂಕಕ್ಕೆ ಕಾರಣವಾಗಿದೆ. ಸುಮಾರು ನಾಲ್ಕು ಗಂಟೆಗಳ ಮುಖ್ಯಮಂತ್ರಿಗಳ ಸಂಪರ್ಕ ಕಡಿಕಗೊಂಡಿದ್ದರಿಂದ ತೀವ್ರ ಆತಂಕ ಎದುರಿಸಬೇಕಾಯಿತು ಎಂದು ಆಂಧ್ರಪ್ರದೇಶ ಸಮಾಜ ಕಲ್ಯಾಣ ಇಲಾಖೆ ಸಚಿವ ಪಿಲ್ಲಿ ಸುಭಾಷ್ ಭೋಸ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಗೆ ಕರ್ನೂಲ್ ನಿಂದ ಹೆಲಿಕ್ಯಾಪ್ಟರ್ ಮೂಲಕ ರಾಜಶೇಖರರೆಡ್ಡಿ ಉದ್ದೇಶಿತ ಚಿತ್ತೂರಿಗೆ ತೆರಳುತ್ತಿದ್ದರು. ಚಿತ್ತೂರ್ ನಲ್ಲಿ 10.45ಕ್ಕೆ ಹೆಲಿಕ್ಯಾಪ್ಟರ್ ಇಳಿಯಬೇಕಿತ್ತು. ಆದರೆ, ಗಾಳಿ, ಮಳೆ ಇದ್ದ ಕಾರಣ ಸಿಗ್ನಲ್ ಕೊರತೆಯಿಂದಾಗಿ ಭೂಸ್ಪರ್ಷದಲ್ಲಿ ವಿಳಂಬವಾಯಿತು. ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ನಾಪತ್ತೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಶೋಧ ಕಾರ್ಯಕ್ಕೆ ಮುಂದಾಗಿದ್ದು, ನಾಲ್ಕು ಹೆಲಿಕ್ಯಾಪ್ಟರ್ ನ್ನು ಕಳುಹಿಸಿಕೊಡಲಾಗಿತ್ತು. ಮುಖ್ಯಮಂತ್ರಿಗಳ ಸುರಕ್ಷಿತವಾಗಿರುವ ಸಂಗತಿ ತಿಳಿದಿದ್ದು, ನಕ್ಸಲ್ ಪೀಡಿತ ಪ್ರದೇಶವಾಗಿದ್ದರಿಂದ ಸಿಎಂ ಇರುವ ಸ್ಥಳವನ್ನು ಗುಪ್ತವಾಗಿರಿಸಲಾಗಿತ್ತು ಎಂದು ಸರಕಾರಿ ಮೂಲಗಳು ತಿಳಿಸಿವೆ.
(ಏಜನ್ಸೀಸ್)