ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರ್ಷದ ಕೊನೆಗೆ ಆರ್ಥಿಕ ಕುಸಿತ ಮಾಯ : ಪಿಎಂ
ಯೋಜನಾ ಆಯೋಗದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಆರ್ಥಿಕ ಕ್ಷೇತ್ರಕ್ಕೆ ಈ ವರ್ಷ ಅತ್ಯಂತ ಕಠಿಣ ಸಮಯ ಎಂದರು. ಆರ್ಥಿಕ ಕುಸಿತದ ಜೊತೆಗೆ ದೇಶದ ಎದುರು ಇನ್ನೊಂದು ಗಂಭೀರ ಸಮಸ್ಯೆ ಎದುರಿಸತೊಡಗಿದೆ. ಈ ವರ್ಷದಲ್ಲಿ ಮುಂಗಾರಮಳೆ ಗಮನಾರ್ಹ ಮಟ್ಟದಲ್ಲಿ ಕ್ಷೀಣಿಸಿರುವುದು ಕಳವಳದ ಸಂಗತಿ. ಇದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಯೋಜನಾ ಆಯೋಗದ ಮೂಲಕ ಅನೇಕ ಯೋಜನೆಗಳನ್ನು ಘೋಷಣೆ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಮನಮೋಹನ್ ಸಿಂಗ್ ಹೇಳಿದರು.
ಯೋಜನಾ ಆಯೋಗದ ಉನ್ನತ ಸಭೆಯಲ್ಲಿ ಹಣಕಾಸು ಸತಿವ ಪ್ರಣಬ್ ಮುಖರ್ಜಿ, ಕೃಷಿ ಸಚಿವ ಶರದ್ ಪವಾರ್, ಗೃಹ ಸಚಿವ ಪಿ ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತಿತರು ಉಪಸ್ಥಿತರಿದ್ದರು.
(ಏಜನ್ಸೀಸ್)
Comments
ಮನಮೋಹನ್ ಸಿಂಗ್ ಪ್ರಣಬ್ ಮುಖರ್ಜಿ manmohan singh ಆರ್ಥಿಕ ಕುಸಿತ ನವದೆಹಲಿ new delhi ಪಿ ಚಿದಂಬರಂ sharad pawar p chidambaram ಶರದ್ ಪವಾರ್ indian economy
Story first published: Tuesday, September 1, 2009, 16:45 [IST]