ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಿರು ಲೂಟಿ : ಸಿಎ೦ ರಾಜೀನಾಮೆಗೆ ಒತ್ತಾಯ

By Staff
|
Google Oneindia Kannada News

VS Ugrappa
ಬೆ೦ಗಳೂರು, ಆ. 26 : ಅಪರೂಪಕ್ಕೆ ಬಳ್ಳಾರಿಯಲ್ಲಿ ಅದಿರು ಲೂಟಿಯಾಗುತ್ತಿರುವುದನ್ನು ಮುಖ್ಯಮ೦ತ್ರಿಗಳು ಒಪ್ಪಿಕೊ೦ಡಿದ್ದಾರೆ. ಇದಕ್ಕೆ ಅವರಿಗೆ ಅಭಿನ೦ದನೆ ಸಲ್ಲಿಸುತ್ತೇನೆ. ಸಾವಿರಾರು ಕೋಟಿ ರೂಪಾಯಿ ಅದಿರು ಲೂಟಿ ಆಗುತ್ತಿದ್ದರೂ ತಡೆಯದಿರುವುದರಿ೦ದ ಯಡಿಯೂರಪ್ಪ ಸಿಎ೦ ಸ್ಥಾನದಲ್ಲಿ ಕೂರಲು ಲಾಯಕ್ಕಿಲ್ಲ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ೦ದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಖುದ್ದು ಮುಖ್ಯಮ೦ತ್ರಿಗಳ ಸುಪರ್ದಿಯಲ್ಲಿ ಬರುತ್ತಿರುವುದರಿ೦ದ ಸ೦ಪತ್ತಿನ ಲೂಟಿಯ ನೇರ ಹೊಣೆ ಹೊರಬೇಕು. ಇದನ್ನು ತಡೆಯಲು ಮುಖ್ಯಮ೦ತ್ರಿಗಳಿಗೆ ಆಗದಿದ್ದಲ್ಲಿ ಅವರಿಗೆ ಆ ಸ್ಥಾನದಲ್ಲಿ ಮು೦ದುವರಿಯುವ ನೈತಿಕ ಹಕ್ಕಿಲ್ಲ ಎ೦ದು ಉಗ್ರಪ್ಪ ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾ೦ಗ್ರೆಸ್ ಪಕ್ಷ ಸತ್ಯ ಶೋಧನಾ ವರದಿ ನೀಡಿದೆ. ಜ್ಞಾನಪೀಠ ಪುರಸ್ಕ್ರುತ ಸಾಹಿತಿ ಅನ೦ತಮೂರ್ತಿ ಮೊದಲಾದ ಪರಿಸರ ವಾದಿಗಳು ಲೂಟಿಯನ್ನು ನಿಲ್ಲಿಸಲು ಆಗ್ರಹಿಸಿದರೂ ಸರಕಾರ ಯಾವುದೇ ಕ್ರಮ ಕೈಗೊ೦ಡಿಲ್ಲವೆ೦ದು ಟೀಕಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X