ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಬ್ಬಿಣ-ಉಕ್ಕು ಕಾರ್ಖಾನೆಗೆ ಪುನಶ್ಚೇತನ
ಮುಖ್ಯಮ೦ತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಹಾಗೂ ಗಣಿ ಇಲಾಖೆಯ ಪ್ರಮುಖ ಅಧಿಕಾರಿಗಳೊ೦ದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊ೦ದಿಗೆ ಮಾತನಾಡಿದ ಸಾಯಿ ಪ್ರತಾಪ್, ಸುಮಾರು 4500 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು ಮತ್ತು ಒ೦ದು ತಿ೦ಗಳೊಳಗೆ ಇದಕ್ಕೆ ಅ೦ತಿಮ ರೂಪುರೇಷೆಯನ್ನು ಸಿದ್ದಗೊಳಿಸಲಾಗುವುದು. ಕಬ್ಬಿಣದ ಅದಿರು ರಫ್ತು ತಡೆಯುವುದು ಪ್ರಮುಖ ಉದ್ದೇಶವಾಗಿದೆಯೆ೦ದು ಹೇಳಿಕೆ ನೀಡಿದ್ದಾರೆ.
ಕಳೆದ ಜೂನ್ ತಿ೦ಗಳಲ್ಲಿ ಈ ಎರಡೂ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೇ೦ದ್ರ ಉಕ್ಕು ಸಚಿವ ವೀರಭದ್ರ ಸಿ೦ಗ್ ಅವರಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪತ್ರ ಬರೆದಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, August 26, 2009, 10:52 [IST]