ಎಚ್ಡಿಕೆ ಭಂಟ ರಾಜುಗೆ ಗೆಲುವಿನ ಕನಸು
ಒಟ್ಟು
15
ಹಂತದ
ಮತ
ಎಣಿಕೆ
ಕಾರ್ಯ
ನಡೆಯಲಿದ್ದು.
ಸಮಯ
9.45
ರ
ಮತ
ಎಣಿಕೆಯಂತೆ
ಅಭ್ಯರ್ಥಿಗಳ
ಸ್ಥಿತಿ
ಗತಿ
ಹೀಗಿದೆ:
ರಾಮನಗರದಲ್ಲಿ
ಮೂರು
ಹಂತದ
ಎಣಿಕೆ
ಮುಗಿದಿದ್ದು,
ಜೆಡಿಎಸ್
ನ
ಕೆ.ರಾಜು
ಅವರು
ಕಾಂಗ್ರೆಸ್ಸಿನ
ಸಿಎಂ
ಲಿಂಗಪ್ಪ
ಅವರಿಗಿಂತ
8066
ಮತಗಳಿಂದ
ಮುನ್ನಡೆಯಲ್ಲಿದ್ದಾರೆ.
ಉಳಿದಂತೆ
ಚಿತ್ತಾಪುರದಲ್ಲಿ
4ನೇ
ಸುತ್ತಿನ
ಮತಎಣಿಕೆ
ನಂತರ
ಪ್ರಿಯಾಂಕಾ
ಖರ್ಗೆ
ಅವರು
ಬಿಜೆಪಿಯ
ವಾಲ್ಮೀಕಿ
ನಾಯಕ
ಅವರಿಗಿಂತ
1174ಮತಗಳಿಂದ
ಮುಂದಿದ್ದರು.
ಆದರೆ,
ಕುತೂಹಲ
ತಿರುವು
ಪಡೆದು
ಕೊಂಡು
8ನೇಸುತ್ತಿನ
ಎಣಿಕೆಗೂ
ಮುನ್ನ
ವಾಲ್ಮೀಕಿ
ನಾಯಕ್
366
ಮತಗಳಿಂದ
ಮುನ್ನಡೆ
ಪಡೆದಿದ್ದಾರೆ.
ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ನ ಪ್ರಿಯಾಕೃಷ್ಣ ಅವರು ಬಿಜೆಪಿ ವಿ ಸೋಮಣ್ಣ ಅವರಿಗಿಂತ 979ಮತಗಳಿಂದ ಮುಂದಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಯ ಸಿಪಿ ಯೋಗಿಶ್ವರ್ ಅವರಿಗಿಂತ ಜೆಡಿಎಸ್ ನ ಎಂ ಅಶ್ವಥ್ ಅವರು7000 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಕೊಳ್ಳೇಗಾಲದಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದ್ದು, ಜಿಎನ್ ನಂಜುಂಡಸ್ವಾಮಿ ಅವರು ಕಾಂಗ್ರೆಸ್ಸಿನ ಜಯಣ್ಣ ಅವರಿಗಿಂತ 2520 ಮತಗಳಿಂದ ಮುಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)