ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಜೊತೆ ಚಿರು ಪಕ್ಷ ವಿಲೀನ?

By Staff
|
Google Oneindia Kannada News

Chiranjeevi
ಹೈದರಾಬಾದ್, ಆ. 20 : ಭಾರೀ ಅಭಿಮಾನಿಗಳ ಬೆಂಬಲ ಮತ್ತು ನಿರೀಕ್ಷೆಯೊಂದಿಗೆ ತಿರುಪತಿಯಲ್ಲಿ ಕೇವಲ ಒಂದು ವರ್ಷದ ಹಿಂದೆ ತೆಲುಗು ನಟ ಚಿರಂಜೀವಿ ಸ್ಥಾಪಿಸಿದ್ದ 'ಪ್ರಜಾರಾಜ್ಯಂ' ಪಕ್ಷ ಆಡಳಿತ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಲಿದೆ ಎನ್ನುವ ಸುದ್ದಿ ಆಂಧ್ರಪ್ರದೇಶದಲ್ಲಿ ದಟ್ಟವಾಗಿ ಹಬ್ಬಿದೆ. ಪಕ್ಷದ 18 ಶಾಸಕರುಗಳ ಪೈಕಿ 5 ಶಾಸಕರು ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಲು ತೀವ್ರ ಒತ್ತಡ ತಂದಿದ್ದಾರೆಂದು ವರದಿಯಾಗಿದೆ.

ಬುಧವಾರ ತಡರಾತ್ರಿ ಪಕ್ಷದ ಐದು ಮಂದಿ ಶಾಸಕರು ಪ್ರಜಾರಾಜ್ಯಂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ಅವರ ನಿವಾಸದಲ್ಲಿ ಭೇಟಿಯಾಗಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಲು ಒತ್ತಡ ತಂದಿದ್ದರೆನ್ನಲಾಗಿದೆ. ಈ ಶಾಸಕರುಗಳಿಗೆ ಅರವಿಂದ್ ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆಂದು ತಿಳಿದು ಬಂದಿದೆ. ಆದರೆ ಪಕ್ಷದ ವಕ್ತಾರ ವಾಸಿರೆಡ್ಡಿ ಪದ್ಮಾ ಈ ಬೆಳವಣಿಗೆಯನ್ನು ನಿರಾಕರಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X