ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬುರ್ಖಾ ವಿವಾದ : ಕಾಲೇಜ್ ಗೆ ನೋಟೀಸ್
ಕಾಲೇಜ್ ಆಡಳಿತ ಮಂಡಳಿ ವಿರುದ್ದ ಆಯೇಷಾ ಹಾಗು ಆಕೆಯ ತಂದೆ ಮೊಹಮ್ಮದ್ ಬುಧವಾರ ನೀಡಿದ ದೂರು ಸ್ವೀಕರಿಸಿದ ಪೊನ್ನುರಾಜ್, ಇದು ಅತ್ಯಂತ ಸೂಕ್ಷ್ಮ ವಿಷಯ. ಇಂತ ನಿರ್ಬಂಧಗಳು ಧರ್ಮಗಳ ನಡುವೆ ವಿಭಜನೆಗೆ ದಾರಿ ಮಾಡಿಕೊಡಲಿದೆ. ಯಾರೂ ತಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ. ದೂರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಎಸ್ ವಿ ಎಸ್ ಕಾಲೇಜ್ ಅನುದಾನಿತ ಖಾಸಗಿ ಕಾಲೇಜ್ ಆಗಿರುವುದರಿಂದ ನೇರ ಕ್ರಮ ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲ. ಕಾಲೇಜ್ ನೀಡುವ ಸ್ಪಷ್ಟನೆ ನಂತರ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವುದಾಗಿ ತಿಳಿಸಿರುವ ಪೊನ್ನುರಾಜ್, ಒತ್ತಡಕ್ಕೆ ಮಣಿಯುವ ಅವಶ್ಯಕತೆಯಿಲ್ಲ. ಬಾಹ್ಯಶಕ್ತಿಗಳು ಪ್ರಭಾವ ಬೀರಿದರೆ ಪೋಲಿಸ್ ಇಲಾಖೆ ಗಮನಕ್ಕೆ ತನ್ನಿ ಎಂದು ಆಯೇಷಾ ಹಾಗೂ ಆಕೆಯ ತಂದೆಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, August 20, 2009, 10:00 [IST]