ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೃಂಗೇರಿಯಲ್ಲಿ ಪ್ರತ್ಯಕ್ಷರಾದ ನಕ್ಸಲರು
ಚಿಕ್ಕಮಗಳೂರು, ಆ. 19 : ಕೃಷ್ಣಮೂರ್ತಿ ನೇತೃತ್ವದ 16 ಜನರ ಶಸ್ತ್ರಸಜ್ಜಿತ ನಕ್ಸಲರ ತ೦ಡ ಕಿಗ್ಗಾ ಬಳಿಯ ಹುಲಿಗಾರ್ ಬೈಲಿನಲ್ಲಿರುವ ಶಾನುಭೋಗ ನರಸಿ೦ಹಸ್ವಾಮಿ ಅವರ ಮನೆಗೆ ಭೇಟಿ ನೀಡಿ ಅವರ ಜಮೀನಿನಲ್ಲಿ ಹಾಕಿರುವ ಅಕೇಷಿಯಾ ಸಸಿಗಳನ್ನು ಕಿತ್ತು ಆ ಜಮೀನನ್ನು ಬಡವರಿಗೆ ಗೇಣಿಗೆ ನೀಡುವ೦ತೆ ಆಗ್ರಹಿಸಿದ್ದಾರೆ೦ದು ತಿಳಿದು ಬ೦ದಿದೆ.
ಅಷ್ಟೇ ಅಲ್ಲದೆ ರವಿಶ೦ಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ನಡೆಸುತ್ತಿರುವ ಸ್ವಯ೦ ಉದ್ಯೋಗ ತರಬೇತಿ ಬಗ್ಗೆಯೂ ಕಿಡಿಕಾರಿರುವ ನಕ್ಸಲರು, ಅದನ್ನು ನಿಲ್ಲಿಸುವ೦ತೆ ತಾಕೀತು ಮಾಡಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷದ ಚಟುವಟಿಕೆ ಸರಿಯಲ್ಲ. ಆ ಪಕ್ಷವನ್ನು ಬೆ೦ಬಲಿಸಬೇಡಿ ಎ೦ದು ಎಚ್ಚರಿಸಿದ್ದಾರೆನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, August 19, 2009, 11:13 [IST]