ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತ್ತೊಂದು ಮುಂಬೈ ಮಾದರಿ ದಾಳಿ : ಪಿಎಂ
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮತ್ತೊಮ್ಮೆ ದಾಳಿ ನಡೆಸುವ ಉಗ್ರರ ಸಂಚನ್ನು ವಿಫಲಗೊಳಿಸಲು ಆಯಾ ರಾಜ್ಯಗಳ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಇದಕ್ಕೆ ಕೇಂದ್ರ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು. ಗುಪ್ತಚರ ಇಲಾಖೆಗಳ ಪ್ರಕಾರ ಗಡಿ ಪ್ರದೇಶಗಳಿಂದ ಭಯೋತ್ಪಾದಕರು ನುಸುಳುತ್ತಿದ್ದಾರೆ ಎಂಬ ವರದಿ ಬಂದಿದೆ. ಇದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಲಾಗುವುದು ಎಂದು ಸಿಂಗ್ ವಿವರಿಸಿದರು.
ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಕೇಂದ್ರದೊಂದಿಗೆ ಸಹಕರಿಸಬೇಕು. ಈ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಭಯೋತ್ಪಾದನೆ ಧಮನ ಮಾಡುವುದು ನಮ್ಮೆಲ್ಲರ ಗುರಿ ಹಾಗೂ ಜವಾಬ್ದಾರಿ ಎಂದು ಸಿಂಗ್ ಹೇಳಿದರು. ಮುಂಬೈ ದಾಳಿಕೋರರು ಸಮುದ್ರ ಮಾರ್ಗ ಮೂಲಕ ಭಾರತದೊಳಗೆ ನುಸುಳಿದ್ದರು. ಹೀಗಾಗಿ ಸಮುದ್ರ ತೀರದೆಡೆಗೆ ತೀವ್ರ ನಿಗಾ ವಹಿಸಲಾಗಿದೆ. ಎಲ್ಲ ರಾಜ್ಯಗಳು ರಾಷ್ಟ್ರೀಯ ತನಿಖಾ ಏಜೆನ್ಸಿ ಕಾನೂನನ್ನು ಬೆಂಬಲಿಸಬೇಕು ಎಂದು ಮನಮೋಹನ್ ಸಿಂಗ್ ಸಲಹೆ ನೀಡಿದರು.
(ಏಜನ್ಸೀಸ್)
Comments
ಮುಂಬೈ ಸ್ಫೋಟ 2008 ಭಾರತ india pakistan ಪಾಕಿಸ್ತಾನ ಮನಮೋಹನ್ ಸಿಂಗ್ ಭಯೋತ್ಪಾದನೆ terrorism manmohan singh ನವದೆಹಲಿ new delhi p chidambaram ಪಿ ಚಿದಂಬರಂ naxalism ನಕ್ಸಲಿಸಂ
Story first published: Monday, August 17, 2009, 17:00 [IST]