ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಋಣ ತೀರಿಸಿ: ಮಾಜಿ ಪ್ರಧಾನಿ ದೇವೇಗೌಡ

By Staff
|
Google Oneindia Kannada News

Deve Gowda
ಚನ್ನಪಟ್ಟಣ ಆ 17: ಅನನುಭವಿಯಾದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ ರಾಜ್ಯದ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾದರು. ಇಂತಹ ನಾಯಕನ ಋಣ ನಿಮ್ಮ ಮೇಲಿದೆ. ಈ ಋಣ ತೀರಿಸಲು ಇದು ಸಕಾಲ ನಿಮ್ಮ ಮತವನ್ನು ನಮ್ಮ ಪಕ್ಷದ ಅಭ್ಯರ್ಥಿ ಎಂ ಸಿ ಅಶ್ವಥ್ ಅವರಿಗೆ ನೀಡಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆಮಾಡಿ ಎಂದು ಜೆಡಿಎಸ್ ಸರ್ವೋಚ್ಚ ನಾಯಕ ದೇವೇಗೌಡ ಮತದಾರರಿಗೆ ಕರೆನೀಡಿದ್ದಾರೆ.

ಈ ಭಾಗದ ರೈತರ ಪರ ಲೋಕಸಭೆಯಲ್ಲಿ ಸಮರ್ಪಕವಾಗಿ ಧ್ವನಿ ಎತ್ತ ಬೇಕಾದರೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಎಚ್ ಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ. ಬಡವರ ಮತ್ತು ರೈತರ ಪರವಾಗಿರುವ ನಮ್ಮ ಪಕ್ಷದ ಅಬ್ಯರ್ಥಿಯನ್ನು ಬೆಂಬಲಿಸಿ ಎಂದರು.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಗದ್ದುಗೆ ಏರಿದ ಕೆಲವೇ ದಿನಗಳಲ್ಲಿ ಗೊಬ್ಬರ ಕೇಳಲು ಹೋದ ರೈತನಿಗೆ ಗುಂಡಿಕ್ಕಿಸಿ ರೈತ ವಿರೋಧಿತನವನ್ನು ಬಿಂಬಿಸಿದರು. ರೈತ ವಿರೋಧಿ ಈ ಸರಕಾರವನ್ನು ಬಗ್ಗು ಬಡಿಯಲು ಕ್ಷೇತ್ರದಲ್ಲಿನ ನಮ್ಮ ಅಬ್ಯರ್ಥಿಗೆ ಮತನೀಡಿ ಎಂದು ದೇವೇಗೌಡ ಕರೆಕೊಟ್ಟಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X