ಕೆಪಿಎಲ್ ಟಿ 20 ಗೆ ಆಟಗಾರರ ಬಿಕರಿ
ಶುಕ್ರವಾರ ಬೆಳಗ್ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಕೆಎಸ್ ಸಿಎ ಆವರಣದಲ್ಲಿ ಆಟಗಾರರ ಬಿಡ್ಡಿಂಗ್ ಆರಂಭಗೊಂಡಿತು. ಸ್ಟಾರ್ ಆಟಗಾರನೆಂದೇ ಬಿಂಬಿಸಲಾಗಿದ್ದ ರಾಬಿನ್ ಉತ್ತಪ್ಪ ಬೆಂಗಳೂರಿನ ಬ್ರಿಗೇಡ್ ಗ್ರೂಫ್ ನ ತಂಡವನ್ನು ಸೇರ್ಪಡೆಗೊಂಡರು. ಮೈಸೂರು ತಂಡಕ್ಕೆ ಕೆ ಬಿ ಪವನ್. ಸಿ ರಘು ತಲಾ 1,80 ಹಾಗೂ 1.60 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ.
ಶಿವಮೂಗ್ಗ ತಂಡಕ್ಕೆ ಕೆ ಪಿ ಅಪ್ಪಣ್ಣ 1.45 ಲಕ್ಷ ರುಪಾಯಿಗಳಿಗೆ, ಗಣೇಶ್ ಸತೀಶ್ 1.30, ರಾಜು ಭಟ್ಕಳ್ 2.10, ಮಿಥುನ್ 1.50 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ದಾವಣಗೆರೆ ಫ್ರಾಂಚೈಸಿಗೆ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು 2.05, ಗೌತಮ್ ಅವರನ್ನು 1.40, ಸುನೀಲ್ ರಾಜ್ 1.35 ಲಕ್ಷ ರುಪಾಯಿಗಳಿಗೆ ಖರೀದ ಮಾಡಲಾಯಿತು.
ಬೆಂಗಳೂರು ಗ್ರಾಮಾಂತ ತಂಡಕ್ಕೆ ಬಿ ಅಖಿಲ್ 3 ಲಕ್ಷ ರುಪಾಯಿ, ತಿಲಕ್ ನಾಯ್ಡು 1.10 ಲಕ್ಷ ರುಪಾಯಿ, ಎನ್ ಸಿ ಅಯ್ಯಪ್ಪ 80 ಸಾವಿರ ಹಾಗೂ ಅಮಿತ್ ವರ್ಮಾ 1.35 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ಮಂಗಳೂರು ಫ್ರಾಂಚೈಸಿಗೆ ಉದಿತ್ ಪಟೇಲ್ 90 ಸಾವಿರ, ಭರತ್ ಚಿಪ್ಲಿ 2.35 ಲಕ್ಷ ರುಪಾಯಿ, ಎಸ್ ಅರವಿಂದ 1.25 ಲಕ್ಷ ರುಪಾಯಿಗೆ ಹರಾಜುಗೊಂಡಿದ್ದಾರೆ.
ಬಿಜಾಪುರ ತಂಡಕ್ಕೆ ರೋಜರ್ ಬಿನ್ನಿ ಮಗ ಸ್ಟುವರ್ಟ್ ಬಿನ್ನಿ 3.20 ಲಕ್ಷ ರುಪಾಯಿ, ದೇವರಾಜ್ 1.70 ಲಕ್ಷ, ಸುದೀಂದ್ರ ಶಿಂಧೆ 95 ಸಾವಿರ ರುಪಾಯಿಗಳಿಗೆ ಹರಾಜುಗೊಂಡರು. ವಿನಯಕುಮಾರ್ 2.50 ಲಕ್ಷ ರುಪಾಯಿ, ಮನೀಶ್ ಪಾಂಡೆ 2.55 ಲಕ್ಷ ಹಾಗೂ ಡೇವಿಡ್ ಜಾನ್ಸನ್ 35 ಸಾವಿರಕ್ಕೆ ಬೆಳಗಾವಿ ತಂಡಕ್ಕೆ ಹರಾಜುಗೊಂಡರು.
(ದಟ್ಸ್ ಕನ್ನಡ ವಾರ್ತೆ)