ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ : ಹಂದಿಜ್ವರ ಶಂಕಿತೆ ಸಾವು

By Staff
|
Google Oneindia Kannada News

Suspected H1N1 woman patient dies in Davangere
ದಾವಣಗೆರೆ, ಆ. 11 : ದೇಶದಾದ್ಯಂತ ಹಂದಿಜ್ವರದ ಹಾವಳಿ ಮುಂದುವರಿದಿದ್ದು, ಈ ಮಹಾಮಾರಿ ರಾಜ್ಯಕ್ಕೂ ಕಾಲಿಟ್ಟಿರುವ ಮುನ್ಸೂಚನೆ ದೊರೆತಿದೆ. ದಾವಣಗೆರೆಯ ಶಾಮನೂರು ಶಿವಶಂಕರಪ್ಪ (ಎಸ್ಎಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬಳು ಹಂದಿಜ್ವರದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತರಿಕೇರೆ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದ ಜ್ಯೋತಿ (29) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ದಿನಗಳ ಹಿಂದೆ ಜ್ಯೋತಿ ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಜ್ಯೋತಿ ಅವರು ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಶಿವಣ್ಣರೆಡ್ಡಿ, ಜ್ಯೋತಿ ಕಳೆದ ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗಾಗಿ ಎಸ್ ಎಸ್ ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗಿದ್ದು, ಆಕೆ ರಕ್ತಹೀನತೆಯಿಂದ ಬಳಲುತ್ತಿದ್ದಳು ಎಂದು ಗೊತ್ತಾಗಿದೆ.

ಜೊತೆಗೆ ಆಕೆಯ ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ರಕ್ತ ಮಾದರಿಯ ಫಲಿತಾಂಶಕ್ಕೆ 48 ಗಂಟೆಗಳ ಸಮಯ ಬೇಕಾಗಿದ್ದು, ಫಲಿತಾಂಶ ಬಂದ ನಂತರ ಜ್ಯೋತಿ ಅವರು ಮೃತಪಟ್ಟಿರುವುದು ಹಂದಿಜ್ವರದಿಂದಲೂ ಅಥವಾ ರಕ್ತ ಹೀನತೆಯಿಂದಲೂ ಎನ್ನುವುದು ತಿಳಿದು ಬರಲಿದೆ ಎಂದು ವಿವರಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X