ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡಪರ ಸಂಘಟನೆಗಳಿಗೆ ಹಿನ್ನಡೆ
ಹೊಗೇನಕಲ್ ಮುಂತಾದ ವಿವಾದಗಳು ಪರಿಹಾರಗೊಂಡ ನಂತರವೇ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ರಾಜ್ಯದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಶಾಸಕ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾವೇದಿಕೆಯ ಪ್ರವೀಣ್ ಶೆಟ್ಟಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಇಂದೇ ವಿಚಾರಣೆಗೆ ತೆಗೆದು ಕೊಳ್ಳಬೇಕು ಎನ್ನುವ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯನ್ಯಾಯಮೂರ್ತಿಗಳಾದ ಪಿ.ಡಿ.ದಿನಕರನ್, ಈ ವಿಚಾರದಲ್ಲಿ ತುರ್ತು ವಿಚಾರಣೆ ಅನಗತ್ಯ. ಭಾಷಾ ಆಧಾರಿತ ಹೋರಾಟ ನಡೆಸಿ ದೇಶವನ್ನು ವಿಭಜಿಸುವ ಕೆಲಸ ಮಾಡಬೇಡಿ. ಹೋರಾಟ ಯಾವಾಗಲು ನ್ಯಾಯ ಸಮ್ಮತವಾಗಿರಬೇಕು ಎಂದು ಹೇಳಿ ಅರ್ಜಿ ವಿಚಾರಣೆ ತಿರಸ್ಕರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
chennai ಬೆಂಗಳೂರು ಯಡಿಯೂರಪ್ಪ high court ಹೈಕೋರ್ಟ್ karunanidhi ತಿರುವಳ್ಳುವರ್ pil prokannada organisation ಎಂ ಕರುಣಾನಿಧಿ tiruvalluvar ಸರ್ವಜ್ಞ sarvajana ಕನ್ನಡ ಸಂಘಗಳು
Story first published: Thursday, August 6, 2009, 15:04 [IST]