ಬೆಂಗಳೂರು ಇಸ್ಕಾನ್ Vs ಮುಂಬೈ ಇಸ್ಕಾನ್
ಕಳೆದ ವರ್ಷ ಕೂಡ ಶಾಸಕ ಮಾಧುಸ್ವಾಮಿ ಇದೇ ರೀತಿಯ ಆರೋಪ ಮಾಡಿದ್ದರು. ನಂತರ ಸತ್ಯ ಸಂಗತಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಇಸ್ಕಾನ್ ಮತ್ತು ಶಿವಕುಮಾರ್ ನಡುವೆ ಯಾವುದೇ ವೈಮನಸ್ಸು ಅಥವಾ ವ್ಯವಹಾರವಿಲ್ಲ. ನಾನು ಹಣ ಮಾಡಿರುವುದನ್ನು ಡಿಕೆಶಿ ಸಾಬೀತು ಪಡಿಸಿದರೆ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಧುಪಂಡಿತ್ ದಾಸ್ ಸವಾಲೆಸೆದಿದ್ದಾರೆ.
ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರಕ್ಕಿಂತ ಮೊದಲೇ ನಾವು ಆರಂಭಿಸಿದ್ದೆವು ಎನ್ನುವ ಸತ್ಯ ಡಿಕೆಶಿ ಗೆ ತಿಳಿದಿಲ್ಲ. ಸರಕಾರದ ಸಹಾಯಧನದ ಜೊತೆ ಪ್ರತಿದಿನ 20 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಇದನ್ನು ಭರಿಸಲು ಅಮೇರಿಕಾದಲ್ಲಿ ನೆಲೆಸಿರುವ ಗುರುರಾಜ್ ದೇಶಪಾಂಡೆ ನೇತೃತ್ವದಲ್ಲಿ ಹಣ ಸಂಗ್ರಹಿಸುತ್ತಿದ್ದೇವೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುಮತಿ ಪಡೆದಿದ್ದೇವೆ. ಬಿಸಿಯೂಟ ಯೋಜನೆಯನ್ನು ನಿಲ್ಲಿಸುವಂತೆ ರಾಜ್ಯ ಸರಕಾರ ಸೂಚಿಸಿದರೆ ಈ ಕೂಡಲೇ ಯೋಜನೆಯನ್ನು ಕೈಬಿಡುತ್ತೇವೆ. ನಮಗೆ ಬೇರೆ ರಾಜ್ಯಗಳಿಂದ ಬೇಡಿಕೆಗಳು ಬರುತ್ತಿವೆ ಎಂದು ಮಧುಪಂಡಿತ್ ದಾಸ್ ಹೇಳಿದ್ದರೆ.
(ದಟ್ಸ್ ಕನ್ನಡ ವಾರ್ತೆ)