ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ ಸಯೀದ್ ಬಂಧನ
ಈ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಭಾರತ ಬರೀ ಆರೋಪ ಮಾಡಿದರೆ ಸಾಲದು, ಸಯೀದ್ ಭಾಗಿಯಾಗಿರುವ ಬಗ್ಗೆ ಅಗತ್ಯ ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದು ಮಲಿಕ್ ಆಗ್ರಹಿಸಿದರು.
ಉಗ್ರರ
ವಿರುದ್ಧ
ಉಗ್ರ
ಕ್ರಮ
ಕೈಗೊಳ್ಳಲು
ಪಾಕಿಸ್ತಾನದ
ಸರಕಾರ
ಹಿಂಜರಿಯುವುದಿಲ್ಲ.
ಆದರೆ,
ಮುಂಬೈ
ದಾಳಿಗೆ
ಸಂಬಂಧಿಸಿದಂತೆ
ಸೂಕ್ತ
ಆಧಾರ
ಒದಗಿಸದರೆ
ಮಾತ್ರ
ಮುಂದಿನ
ಕ್ರಮ
ಎಂದು
ಅವರು
ಸ್ಪಷ್ಟಪಡಿಸಿದರು.
ಆದರೆ,
ಬರೀ
ಆರೋಪ
ಮಾಡುವುದರಿಂದ
ಏನನ್ನೂ
ಸಾಧಿಸಲು
ಅಸಾಧ್ಯ.
ಸಾಕ್ಷ್ಯಾಧಾರಗಳಿಲ್ಲದೇ
ಸಯೀದ್
ಅವರನ್ನು
ಬಂಧಿಸಲು
ಸಾಧ್ಯವಿಲ್ಲ
ಎಂದು
ಅವರು
ಪುನರುಚ್ಚರಿಸಿದರು.
(ಏಜೆನ್ಸೀಸ್)
Comments
ಮುಂಬೈ ಸ್ಫೋಟ 2008 ಭಾರತ india pakistan ಇಸ್ಲಾಮಾಬಾದ್ rehman malik islamabad terrorism in india hafiz saeed ಜಮಾತೆ ಉದ್ ದವಾ
Story first published: Tuesday, July 28, 2009, 12:10 [IST]