ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರದಾನ ನೋಂದಣಿ ಮಾಡಿದ ಶ್ರೀರಾಮುಲು

By Staff
|
Google Oneindia Kannada News

Sri Ramulu
ಬಳ್ಳಾರಿ, ಜು. 27 : ಬಳ್ಳಾರಿ ಎಂದ ತಕ್ಷಣ ನನೆಪಿಗೆ ಬರುವುದು ರೆಡ್ಡಿ ಸಹೋದರರು ಮತ್ತು ಆರೋಗ್ಯ ಮಂತ್ರಿ ಬಿ ಶ್ರೀರಾಮುಲು. ಇದರ ಬೆನ್ನಲ್ಲೇ ಇವರ ರಾಜಕೀಯ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ವಿವಾದಕ್ಕೆ ಈ ಹೆಸರುಗಳು ಭಾರಿ ಚಾಲ್ತಿಯಲ್ಲಿವೆ. ಆದರೆ, ಸಚಿವ ಶ್ರೀರಾಮುಲು ಇದೀಗ ವಿಶಿಷ್ಟ ಹಾಗೂ ಶ್ರೇಷ್ಠ ಸುದ್ದಿಗೆ ಭಾಜನರಾಗಿದ್ದಾರೆ.

ಸ್ವತಃ ಆರೋಗ್ಯ ಮಂತ್ರಿಯಾಗಿರುವ ಅವರು ಅಂಧರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀರಾಮುಲು, ಅಂಧರ ಬೆಳಕಾಗುವ ಈ ಶ್ರೇಷ್ಠ ದಾನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಪತ್ನಿ ಭಾಗ್ಯಲಕ್ಷ್ಮಿ ಅವರ ಕಣ್ಣುಗಳನ್ನು ದಾನ ಮಾಡಿದರು. ಸಚಿವರು ದಾನಪತ್ರಕ್ಕೆ ಸಹಿ ಮಾಡಿದ ನಂತರ ಅನೇಕರು ನೇತ್ರದಾನಕ್ಕೆ ಮುಂದಾಗಿದ್ದು ವಿಶೇಷವಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X