ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿಸಚಿವರಿಗೆ ವಿಮೆ ಪರಿಹಾರ ಚೆಕ್ ಹಸ್ತಾಂತರ

By Staff
|
Google Oneindia Kannada News

Karnataka government Crop insurance compensation
ಬೆಂಗಳೂರು, ಜುಲೈ.24: ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ರಾಜ್ಯದಲ್ಲಿ 2008ರ ಮುಂಗಾರು ಹಂಗಾಮಿನ ಬೆಳೆ ವಿಮಾ ನಷ್ಟ ಪರಿಹಾರದ ಮೊತ್ತ ರೂ. 141.46 ಕೋಟಿ ಮೊತ್ತದ ಚೆಕ್ಕನ್ನು ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕ ಸುಕುಮಾರ್ ಅವರು ಕೃಷಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಹಸ್ತಾಂತರಿಸಿದರು.

2008ರ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ 3.15 ಲಕ್ಷ ರೈತರಿಗೆ 141.46 ಕೋಟಿ ರೂ ಗಳ ಪರಿಹಾರ ನೀಡಲಾಗುತ್ತದೆ. ಈ ಹಂಗಾಮಿನಲ್ಲಿ 10.56 ಲಕ್ಷ ರೈತರು ರೂ. 39.27 ಕೋಟಿ ವಿಮಾ ಕಂತನ್ನು ಪಾವತಿಸಿದ್ದರು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ರಾಜ್ಯದಲ್ಲಿ 2007ರ ಮುಂಗಾರು ಹಂಗಾಮಿನಿಂದ ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯಡಿ 2007-08ರಿಂದ 2008ರ ಮುಂಗಾರು ಹಂಗಾಮಿನ ವರೆಗೆ 0.69 ಲಕ್ಷ ರೈತರು ರೂ. 2.32 ಕೋಟಿಗಳನ್ನು ವಿಮಾ ಕಂತಾಗಿ ಪಾವತಿಸಿದ್ದು, ಇವರಲ್ಲಿ ಅರ್ಹ 0.55ಲಕ್ಷ ರೈತರಿಗೆ ರೂ.8 ಕೋಟಿ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ರಾಜ್ಯದಲ್ಲಿ ವ್ಯಾಪಕ ಬೆಳೆ ವಿಮಾ ಯೋಜನೆಯ 1985-86 ರಿಂದ 1999-2000 ನೇ ಸಾಲಿನವರೆಗೆ ಚಾಲ್ತಿಯಲ್ಲಿದ್ದು. ನಂತರ ಮುಕ್ತಾಯಗೊಂಡಿರುತ್ತದೆ. ಈ ಯೋಜನೆಯಡಿ ಬೆಳೆ ಸಾಲ ಪಡೆಯುವ ರೈತರು ಮಾತ್ರ ಭಾಗವಹಿಸುತ್ತಿದ್ದರು. ಒಟ್ಟು 30.02 ಲಕ್ಷ ರೈತರು ರೂ 20.30 ಕೋಟಿಗಳನ್ನು ಈ ಯೋಜನೆಯಡಿ ವಿಮಾ ಕಂತಾಗಿ ಪಾವತಿಸಿ ಭಾಗವಹಿಸಿದ್ದು ಇವರಲ್ಲಿ ಅರ್ಹ 5.60 ಲಕ್ಷ ರೈತರಿಗೆ ರೂ 67.17 ಕೋಟಿಗಳ ಬೆಳೆ ವಿಮಾ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ.

2000 ಮುಂಗಾರು ಹಂಗಾಮಿನಿಂದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2007-08ನೇ ಸಾಲಿನವರೆಗೆ 78.50 ಲಕ್ಷ ರೈತರು ರೂ 285.71 ಕೋಟಿಗಳನ್ನು ವಿಮಾ ಕಂತಾಗಿ ಪಾವತಿಸಿ ಭಾಗವಹಿಸಿದ್ದು ಇವರಲ್ಲಿ ಅರ್ಹ 31.83 ಲಕ್ಷ ರೈತರಿಗೆ ರೂ 1263.66 ಕೋಟಿಗಳ ಬೆಳೆ ವಿಮಾ ನಷ್ಟ ಪರಿಹಾರ ವಿತರಿಸಲಾಗಿದೆ.
ಈ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಕೃಷಿ ಇಲಾಖೆಯ ನಿರ್ದೇಶಕ ಡಾ ಎ. ರಾಜಣ್ಣ ಅವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X