ಮುಂಬೈ ಕರಾವಳಿಗೆ ಇಂದು ದೈತ್ಯ ಅಲೆ ಭೀತಿ
ಮುಂಬೈ, ಜು. 24 : ಈ ಶತಮಾನದ ದೈತ್ಯ ಅಲೆಗಳು ದೇಶದ ವಾಣಿಜ್ಯ ನಗರಿ ಮುಂಬೈ ಕರಾವಳಿಗೆ ಇಂದು ಅಪ್ಪಳಿಸಲಿದೆ. ಅಂದಾಜು 4.85 ರಿಂದ 5.1 ಮೀಟರ್ ಎತ್ತರದ ಭಾರಿ ದೈತ್ಯ ಅಲೆಗಳು ಮಧ್ಯಾಹ್ನ ಸುಮಾರು 2.05 ರ ಸುಮಾರಿಗೆ ಅಪ್ಪಳಿಸಲಿದ್ದು , ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಈಗಾಗಲೇ ಮಳೆಯಿಂದ ತತ್ತರಿಸಿರುವ ಮುಂಬೈ ಮಹಾನಗರಿಯಲ್ಲಿ ಈ ಭಾರಿ ಅಲೆಗಳಿಂದ ಮತ್ತೆ ಕುಂಭದ್ರೋಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಶನ್ ಸಿದ್ದತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳಿಂದ 4.5 ಮೀಟರ್ ಎತ್ತರದಷ್ಟು ಅಲೆಗಳು ಮುಂಬೈ ಕರಾವಳಿಗೆ ಅಪ್ಪಳಿಸುತ್ತಿದ್ದು, ಕೊಲಬಾ, ಕುಫಿ ಪರೇಡ್, ಅಂಧೇರಿ, ಜೋಗೇಶ್ವರಿ ಪ್ರದೇಶದ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ. ದಾದರ್, ಜುಹೂ, ಮಲಾಡ್ ಮುಂತಾದ ಪ್ರದೇಶಗಳಲ್ಲಿ ಗುರುವಾರ ಸಮುದ್ರದಿಂದ ನೀರು ನುಗ್ಗಿತ್ತು. ಮುಂಬೈ ಮಹಾನಗರ ಮೇಯರ್ ಶುಭಾ ರಾಲ ಅವರ ಮನೆ ಕೂಡಾ ಸಮುದ್ರದ ನೀರಿನಿಂದ ಜಲಾತವಾಗಿದೆ.
(ಏಜನ್ಸೀಸ್)