ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಸಬ್ ನನ್ನು ಗೇಟ್ ವೇ ಮುಂದೆ ನೇಣಿಗೇರಿಸಿ : ಠಾಕ್ರೆ
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ಲೇಖನದಲ್ಲಿ ಕಸಬ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಆತನ ವಿಚಾರಣೆ ನಡೆಸುವುದನ್ನು ಕೈಬಿಟ್ಟು ಕೂಡಲೇ ಅವನಿಗೆ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಸಂಸತ್ ದಾಳಿಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರುನನ್ನು ಹವಾನಿಯಂತ್ರಿತ ಜೈಲಿನಲ್ಲಿ ಇರಿಸಲಾಗಿದೆ.
ಕಸಬ್ ಕೂಡಾ ಆತನ ಪಟ್ಟಿಗೆ ಸೇರಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಠಾಕ್ರೆ, ಮುಸ್ಲಿಮರ ಮತಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಸರಕಾರ ಉಗ್ರರನ್ನು ರಕ್ಷಿಸುತ್ತಿರುವುದು ಅತ್ಯಂತ ಖಂಡನೀಯ. ನಗರದ ಗೇಟ್ ವೇ ಆಫ್ ಇಂಡಿಯಾದ ಬಳಿ ಕಸಬ್ ನನ್ನು ನೇಣಿಗೇರಿಸಬೇಕು. ಇದರೊಂದಿಗೆ ಮುಂಬೈ ದಾಳಿಯಲ್ಲಿ ಮಡಿದ ವೀರಯೋಧರ ಆತ್ಮಕ್ಕೆ ಶಾಂತಿ ದೊರೆಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
(ಏಜನ್ಸೀಸ್)
ಮುಂಬೈ ಸ್ಫೋಟ 2008 mumbai ಮುಂಬೈ pakistan ಪಾಕಿಸ್ತಾನ bal thackeray ಶಿವಸೇನೆ ಬಾಳಾ ಠಾಕ್ರೆ ಅಜ್ಮಲ್ ಕಸಬ್ ಭಯೋತ್ಪಾದನೆ terrorism
Story first published: Thursday, July 23, 2009, 15:23 [IST]