ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಾರಣಾಸಿ:ಗಂಗಾಸ್ನಾನ ಕಾಲ್ತುಳಿತಕ್ಕೆ 2 ಬಲಿ
ವಾರಣಾಸಿ, ಜು. 22 : ಸಂಪೂರ್ಣ ಸೂರ್ಯಗ್ರಹಣದ ಬಳಿಕ ಪವಿತ್ರ ಗಂಗಾಸ್ನಾನಕ್ಕಾಗಿ ಇಲ್ಲಿನ ಅಶ್ವಮೇದ್ ಘಾಟ್ ನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಇಬ್ಬರು ಬಲಿಯಾಗಿ ಇತರ 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಸೂರ್ಯಗ್ರಹಣ ವೀಕ್ಷಿಸಲು ಇಲ್ಲಿ ಸುಮಾರು 60 ರಿಂದ 70 ಸಾವಿರ ಮಂದಿ ಜಮಾಯಿಸಿದ್ದರು. ಗ್ರಹಣ ವೀಕ್ಷಣೆ ಬಳಿಕ ಗಂಗಾನದಿ ಸ್ನಾನಕ್ಕಾಗಿ ಸಾವಿರಾರು ಮಂದಿ ಒಟ್ಟಾಗಿ ಧಾವಿಸಿದಾಗ ಜನಜಂಗುಳಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಓರ್ವ ಮಹಿಳೆಯೂ ಸೇರಿದಂತೆ ಇಬ್ಬರು ಮೃತಪಟ್ಟು ಇತರ 15 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಡಿಐಜಿ ಪಿ.ಸಿ. ಮೀನಾ ಹೇಳಿದ್ದಾರೆ.
(ಏಜನ್ಸೀಸ್)
Comments
Story first published: Wednesday, July 22, 2009, 12:30 [IST]