ರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ
ನಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ, ನನ್ನ ಚಿಕ್ಕ ವಯಸ್ಸಿನಿಂದಲೇ ರಾಮಾಯಣವನ್ನು ಟೀಕೆ ಮಾಡುತ್ತ ಬಂದಿದ್ದೇನೆ. ಅದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗೆ ಯಾವ ಮುಲಾಜು ಇಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಕನ್ನಡದ ಶ್ರೀರಾಮಾಯಣ ಮಹಾನ್ವೇಷಣಂ ಪುಸ್ತಕದ ತಮಿಳು ಆವೃತ್ತಿ 'ರಾಮಾಯಣ ಪೆರುಂತೆಡಲ್' ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಮೊಯ್ಲಿ ಅವರು ರಾಮಾಯಣ ನಿರೂಪಿಸಿದ ಶೈಲಿ ವಿಭಿನ್ನವಾಗಿದೆ. ಮೂಲ ರಾಮಾಯಣಕ್ಕೂ ಮೊಯ್ಲಿ ಅವರು ಬರೆದಿರುವ ರಾಮಾಯಣಕ್ಕೂ ತುಂಬಾ ವ್ಯತ್ಯಾಸವಿದೆ. ಅವರು ತಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ಪದ್ಯರೂಪದಲ್ಲಿ ಪ್ರಕಟಿಸಿದ್ದಾರೆ, ಅದಕ್ಕಾಗಿ ತಾನು ಈ ಪುಸ್ತಕ ಬಿಡುಗಡೆಗೆ ಒಪ್ಪಿಗೆ ನೀಡಿದೆ ಎಂದು ಕರುಣಾನಿಧಿ ಹೇಳಿದ್ದಾರೆ.
ನನ್ನ ಈ ಪುಸ್ತಕವು ಬರೀ ರಾಮಯಣದ ಕಥೆಯಲ್ಲ, ಪ್ರತಿಪುಟದಲ್ಲಿಯೂ ಓದುಗರಿಗೆ ಸಂದೇಶವಿದೆ. ಮಹಾಭಾರತದ ಪ್ರಮುಖ ಪಾತ್ರಗಳಲ್ಲೊಂದಾದ ದ್ರೌಪತಿಯ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದು, ಅದು ಒಂದು ವರ್ಷದೊಳಗೆ ಬಿಡುಗಡೆಯಾಗಲಿದೆ ಎಂದು ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
(ಏಜನ್ಸೀಸ್)