ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಅವರ ಮತ್ತೊಂದು ರಥಯಾತ್ರೆ

By Staff
|
Google Oneindia Kannada News

L K Advani
ನವದೆಹಲಿ,ಜು.20: ಲೋಕಸಭಾ ಚುನಾವಣೆಯ ಸೋಲಿನ ನಂತರ ಇನ್ನೇನು ಅಡ್ವಾಣಿ ಅಧ್ಯಾಯ ಮುಗಿಯಿತು ಎನ್ನುವಷ್ಟರಲ್ಲೇ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಮತ್ತೊಂದು ಯಾತ್ರೆಗೆ ಸಜ್ಜಾಗಿದ್ದಾರೆ. ಆದರೆ ಈ ಬಾರಿ ಇದು ರಥಯಾತ್ರೆಯಲ್ಲ. ಜನರನ್ನು ಗುರಿಯಾಗಿಸಿಕೊಳ್ಳದೇ ಪಕ್ಷದ ಕಾರ್ಯಕರ್ತರನ್ನು ಸಂದರ್ಶಿಸಿ ಪಕ್ಷವನ್ನು ಮರುಸಂಘಟನೆ ಮಾಡುವ ಯಾತ್ರೆಗೆ ಸಜ್ಜಾಗಿದ್ದಾರೆ.

ಲೋಕಸಭೆ ಚುನಾವಣೆ ಸೋಲಿನಿಂದ ಅಧೀರರಾಗುವುದು ಏನೂ ಇಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಬೇಕಿದೆ. ಹಾಗಾಗಿ ದೇಶಾದ್ಯಂತ ಯಾತ್ರೆ ಕೈಗೊಳ್ಳಲು ನಿಶ್ಚಯಿಸಿದ್ದೇನೆ ಎಂದು ಆಡ್ವಾಣಿ ತಿಳಿಸಿದ್ದಾರೆ. ಯಾತ್ರೆಯ ವೇಳೆ ಲೋಕಸಭೆ ಚುನಾವಣೆಯ ಸೋಲಿಗೆ ಕಾರಣವಾದ ಅಂಶಗಳನ್ನು ಕಾರ್ಯಕರ್ತರಿಂದ ತಿಳಿದೊಕೊಂಡು ಅವರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶ ಹೊಂದಿದ್ದೇನೆ ಎಂದು 81ರ ಹರೆಯದ ಆಡ್ವಾಣಿ ಹೇಳಿದ್ದಾರೆ.

ಆಗಸ್ಟ್ 21 ರಂದು ಮೂರು ದಿನಗಳ ಬಿಜೆಪಿಯ ಚಿಂತನ ಬೈಠಕ್ ನಡೆಯಲಿದೆ. ಅದಾದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಆಡ್ವಾಣಿ ದೇಶವ್ಯಾಪಿ ಯಾತ್ರೆಗೆ ಹೊರಡಲಿದ್ದಾರೆ. ಹಲವಾರು ರಥಯಾತ್ರೆಗಳ ಮೂಲಕ ಅಡ್ವಾಣಿ ಅವರು ಜನಪ್ರಿಯರಾಗಿದ್ದಾರೆ. 1993ರಲ್ಲಿ ಜನಾದೇಶ ಯಾತ್ರಾ ಮತ್ತು 2006ರಲ್ಲಿ ಭಾರತ ಸುರಕ್ಷಾ ಯಾತ್ರೆಯನ್ನು ಅಡ್ವಾಣಿ ಕೈಗೊಂಡಿದ್ದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X