ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡ್ವಾಣಿ ಅವರ ಮತ್ತೊಂದು ರಥಯಾತ್ರೆ
ಲೋಕಸಭೆ ಚುನಾವಣೆ ಸೋಲಿನಿಂದ ಅಧೀರರಾಗುವುದು ಏನೂ ಇಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಬೇಕಿದೆ. ಹಾಗಾಗಿ ದೇಶಾದ್ಯಂತ ಯಾತ್ರೆ ಕೈಗೊಳ್ಳಲು ನಿಶ್ಚಯಿಸಿದ್ದೇನೆ ಎಂದು ಆಡ್ವಾಣಿ ತಿಳಿಸಿದ್ದಾರೆ. ಯಾತ್ರೆಯ ವೇಳೆ ಲೋಕಸಭೆ ಚುನಾವಣೆಯ ಸೋಲಿಗೆ ಕಾರಣವಾದ ಅಂಶಗಳನ್ನು ಕಾರ್ಯಕರ್ತರಿಂದ ತಿಳಿದೊಕೊಂಡು ಅವರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶ ಹೊಂದಿದ್ದೇನೆ ಎಂದು 81ರ ಹರೆಯದ ಆಡ್ವಾಣಿ ಹೇಳಿದ್ದಾರೆ.
ಆಗಸ್ಟ್ 21 ರಂದು ಮೂರು ದಿನಗಳ ಬಿಜೆಪಿಯ ಚಿಂತನ ಬೈಠಕ್ ನಡೆಯಲಿದೆ. ಅದಾದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಆಡ್ವಾಣಿ ದೇಶವ್ಯಾಪಿ ಯಾತ್ರೆಗೆ ಹೊರಡಲಿದ್ದಾರೆ. ಹಲವಾರು ರಥಯಾತ್ರೆಗಳ ಮೂಲಕ ಅಡ್ವಾಣಿ ಅವರು ಜನಪ್ರಿಯರಾಗಿದ್ದಾರೆ. 1993ರಲ್ಲಿ ಜನಾದೇಶ ಯಾತ್ರಾ ಮತ್ತು 2006ರಲ್ಲಿ ಭಾರತ ಸುರಕ್ಷಾ ಯಾತ್ರೆಯನ್ನು ಅಡ್ವಾಣಿ ಕೈಗೊಂಡಿದ್ದರು.
(ಏಜನ್ಸೀಸ್)
Comments
Story first published: Monday, July 20, 2009, 12:26 [IST]