ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತಾಂತರಕ್ಕೆ ಯತ್ನಿಸಿದವರಿಗೆ ಸಾರ್ವಜನಿಕರ ಧರ್ಮದೇಟು
ಬೆಂಗಳೂರು, ಜು. 18 : ಹಣಕಾಸು ಸಹಾಯದ ಆಮಿಷವೊಡ್ಡಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು ಜ್ಞಾನಜ್ಯೋತಿ ಬಡಾವಣೆಯ ಸಾರ್ವಜನಿಕರೇ ಹಿಡಿದು ಥಳಿಸಿದ ಘಟನೆ ಇಂದು ಜರುಗಿದೆ.
ಕನ್ನಡದಲ್ಲಿ ಬರೆದ ಸಾಹಿತ್ಯ ಮತ್ತು ಬೈಬಲ್ ಗಳನ್ನು ಹಿಡಿದುಕೊಂಡು ಮನೆಮನೆಗೆ ತೆರಳಿ ಮದನ್ ಕುಮಾರ್, ಜೇಮ್ಸ್ ವೆಸ್ಲಿ, ಮುನೀಂದ್ರ ಕುಮಾರ್ ಮತ್ತು ಅಮರ ಸಿಂಗ್ ಎಂಬ ನಾಲ್ವರು ಮತಾಂತರಗೊಳ್ಳಲು ಜನರನ್ನು ಕೇಳಿಕೊಳ್ಳುತ್ತಿದ್ದರು.
ಸುದ್ದಿ ಹಬ್ಬುತ್ತಿದ್ದಂತೆ ಜಮಾಯಿಸಿದ ಸಾರ್ವಜನಿಕರೇ ನಾಲ್ವರನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ನಂತರ ಅವರನ್ನು ಜ್ಞಾನಭಾರತಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಬಂಧಿತ ನಾಲ್ವರೂ ಉತ್ತಮ ಶಿಕ್ಷಣ ಪಡೆದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, July 18, 2009, 17:10 [IST]