ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೀಟಾ ಪ್ರಕರಣ : ಸೋನಿಯಾ ಕ್ಷಮೆಯಾಚನೆ
ತಮ್ಮ ವಿರುದ್ಧ ಅನಾಗರಿಕ ಹೇಳಿಕೆ ನೀಡಿರುವ ಯುಪಿಸಿಸಿ ಅಧ್ಯಕ್ಷೆ ರೀಟಾ ಜೋಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮೌನ ವಹಿಸಿರುವುದು ಏಕೆ ಎಂದು ಮಾಯಾವತಿ ಪ್ರಶ್ನಿಸಿದ್ದರು. ಸೋನಿಯಾ ಮೌನ ನೋಡಿದರೆ ರೀಟಾ ಅವರ ಅನಾಗರಿಕ ಹೇಳಿಕೆಯನ್ನೂ ಸಮರ್ಥಿಸಿಕೊಳ್ಳುವಂತಿದೆ. ಕಾಂಗ್ರೆಸ್ ಪಕ್ಷವೇ ರೀಟಾ ಬೆನ್ನಿಗೆ ನಿಂತಿದೆ. ಇದು ದೇಶದ ಮಹಿಳೆಯರಿಗೆ ಮಾಡಿದ ಭಾರಿ ಅವಮಾನ. ಕಾಂಗ್ರೆಸ್ ಪಕ್ಷದಿಂದ ದಲಿತ ಮಹಿಳೆಗೆ ಸಾರ್ವಜನಿಕವಾಗಿ ಅವಮಾನಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದರೆ ಸರಕಾರದ ಅಧಿಕಾರಿಗಳು ಇಪ್ಪತ್ತು ಸಾವಿರ ಪರಿಹಾರ ಹಣ ನೀಡುತ್ತಾರೆ. ಒಂದು ಹೆಣ್ಣಿನ ಶೀಲಕ್ಕೆ ಸರಕಾರ ಬೆಲೆ ಕಟ್ಟುತ್ತಿದೆ. ಇದೇ ರೀತಿ ಮುಖ್ಯಮಂತ್ರಿ ಮಾಯಾವತಿಗೇನಾದರೂ ಆದರೆ, ನಾವು ಒಂದು ಕೋಟಿ ರುಪಾಯಿ ಪರಿಹಾರ ನೀಡಲು ಸಿದ್ದ ಎನ್ನುವ ವಿವಾದಕಾರಿ ಹೇಳಿಕೆಯನ್ನು ರೀಟಾ ಜೋಶಿ ನೀಡಿದ್ದರು.
(ಏಜನ್ಸೀಸ್)
Comments
ಕಾಂಗ್ರೆಸ್ congress ಮಾಯಾವತಿ uttar pradesh ಸೋನಿಯಾ ಗಾಂಧಿ sonia gandhi bsp lucknow ಉತ್ತರ ಪ್ರದೇಶ ಲಖನೌ ಬಿಎಸ್ಪಿ hate speech ರೀಟಾ ಬಹುಗುಣ ಜೋಶಿ
Story first published: Thursday, July 16, 2009, 17:58 [IST]