ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಗಲಭೆಯಲ್ಲಿ ಶ್ರೀರಾಮಸೇನೆ ಕೈವಾಡ
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮೈಸೂರಿನ ಗಲಭೆಯಲ್ಲಿ ಕೆಎಫ್ ಡಿ ಮತ್ತು ಪಿಎಫ್ ಐ ಸಂಘಟನೆಗಳ ಕೈವಾಡವಿಲ್ಲ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ವಿಫಲವಾಗಿದೆ. ಬಿಜೆಪಿ ಪಕ್ಷದ ಕೆಲ ಹಿತಾಸಕ್ತಿಗಳು ಹಿಂದೂಗಳಿಗೆ ಪ್ರಚೋದನೆ ನೀಡಿ ಈ ಕೃತ್ಯ ಮಾಡಲು ಪ್ರೇರೆಪಿಸಿವೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಗಲಭೆ ಎಬ್ಬಿಸಿದ್ದ ಶ್ರೀರಾಮಸೇನೆ ಮತ್ತು ಭಜರಂಗದಳ ಸಂಘಟನೆಗಳು ಮೈಸೂರಿನ ಘಟನೆಯಲ್ಲಿ ಮುಖ್ಯಪಾತ್ರ ವಹಿಸಿವೆ. ಆದ್ದರಿಂದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುವಂತೆ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
ಮೈಸೂರು ಯಡಿಯೂರಪ್ಪ ಸಿದ್ದರಾಮಯ್ಯ pramod muthalik srirama sene ಬಜರಂಗದಳ bhajrang dal mysore ಗಲಭೆ ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್
Story first published: Tuesday, July 14, 2009, 14:29 [IST]